ರೌಡಿಶೀಟರ್ನನ್ನು ಲಾಂಗ್ನಿಂದ ಕೊಚ್ಚಿ ಬರ್ಬರ ಹತ್ಯೆ
ಮಂಡ್ಯ: ಹಳೆಯ ದ್ವೇಷಕ್ಕೆ ನಡುರಾತ್ರಿಯಲ್ಲಿ ರೌಡಿಶೀಟರ್ನನ್ನು ಲಾಂಗ್ನಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಅಮೃತಿ ಗ್ರಾಮದ ಬಳಿ ನಡೆದಿದೆ.
ಪಾಂಡವಪುರ ತಾಲೂಕಿನ ಲಕ್ಷ್ಮೀಸಾಗರ ಗ್ರಾಮದ ಮಹೇಶ್ (40) ಕೊಲೆಯಾದ ರೌಡಿಶೀಟರ್. ಮೇಲುಕೋಟೆ ಪೊಲೀಸ್ ಠಾಣೆಯಲ್ಲಿ ಹಲವು ಪ್ರಕರಣಗಳ ಸಂಬಂಧ ಮಹೇಶ್ನನ್ನು ರೌಡಿಶೀಟರನ್ನಾಗಿ ಮಾಡಲಾಗಿತ್ತು. ಜೊತೆಗೆ ಮಹೇಶ್ ಗಡಿಪಾರು ಮಾಡಲು ಸಹ ಪೊಲೀಸರು ನಿರ್ಧಾರ ಮಾಡಿದ್ದರು.




