ಕಿನ್ನಿಗೋಳಿ: ಬಾವಿಗೆ ಬಿದ್ದು ಚಿರತೆ ಮೃತ್ಯು
ಕಿನ್ನಿಗೋಳಿ: ಚಿರತೆಯೊಂದು ಬಾವಿಗೆ ಬಿದ್ದು ಮೃತಪಟ್ಟ ಘಟನೆ ಕಿನ್ನಿಗೋಳಿ ಸಮೀಪ ಮೆನ್ನಬೆಟ್ಟು ಗ್ರಾಮದಲ್ಲಿ ಸೋಮವಾರ ಮುಂಜಾನೆ ನಡೆದಿದೆ.
ಕಿನ್ನಿಗೋಳಿ ಮುಕ್ಕ ರಸ್ತೆ ಸಮೀಪ ರಾಬರ್ಟ್ ಎಂಬವರ ಮನೆಯ ಬಾವಿಗೆ ಬಿದ್ದು ಚಿರತೆ ಸಾವನ್ನಪ್ಪಿದೆ.
ರಾಬರ್ಟ್ ಮುಂಜಾನೆ ಎದ್ದು ಪಂಪ್ ಅನ್ ಮಾಡುವಾಗ ನೀರು ಬರಲಿಲ್ಲ. ಹೀಗಾಗಿ ಅವರು ಬಾವಿ ಇಣುಕಿದಾಗ ಚಿರತೆ ಕಂಡು ಬಂದಿದ್ದು, ತಕ್ಷಣ ಪಂಪ್ ಬಂದ್ ಮಾಡಿದ್ದಾರೆ.




