“ನಿಮಿಷಾ ಪ್ರಿಯಾಳನ್ನು ಕ್ಷಮಿಸುವುದಿಲ್ಲ”: ಹತ್ಯೆಯಾದ ತಲಾಲ್ ಅವರ ಸಹೋದರನ ಹೇಳಿಕೆ
ಯಮೆನ್: ತಾನು ನಿಮಿಷಾ ಪ್ರಿಯಾಳನ್ನು ಕ್ಷಮಿಸುವುದಿಲ್ಲ ಅಂತ ಹತ್ಯೆಯಾದ ತಲಾಲ್ ಅವರ ಸಹೋದರ ಹೇಳಿದ್ದಾರೆ ಎಂದು ವರದಿಯಾಗಿದೆ.
ಯಾವುದೇ ರಾಜಿ ಇಲ್ಲ ಮತ್ತು ಕರುಣೆ ಇಲ್ಲ ಎಂದು ತಲಾಲ್ ಅವರ ಸಹೋದರ ಹೇಳಿದ್ದಾರೆ ಎಂದು ವರದಿಯಾಗಿದೆ.
ಕುಟುಂಬದಲ್ಲಿ ಇನ್ನೂ ಅನೇಕರು ನಿಮಿಷಾ ಪ್ರಿಯಾಳನ್ನು ಕ್ಷಮಿಸುವ ನಿಲುವು ತಾಳಿದ್ದಾರೆ ಎಂದು ತಿಳಿದು ಬಂದಿದೆ. ಸಂಬಂಧಿಕರಲ್ಲಿ ಯಾವುದೇ ಒಮ್ಮತವಿಲ್ಲ. ಆದ್ದರಿಂದ, ಹೆಚ್ಚಿನ ಚರ್ಚೆಗಳು ಬೇಕಾಗುತ್ತವೆ ಎಂದು ಪ್ರತಿನಿಧಿಗಳು ಹೇಳಿದ್ದಾರೆ. ಅವರ ಸಹೋದರನನ್ನು ಕ್ಷಮೆ ನೀಡುವಂತೆ ಮನವೊಲಿಸಲು ತೀವ್ರ ಪ್ರಯತ್ನಗಳು ನಡೆಯುತ್ತಿವೆ ಎಂದು ವರದಿಯಾಗಿದೆ.




