ಕುಲಾಲ ಸಂಘ ವಿಟ್ಲ: ಬೆಳ್ಳಿಕುಂಭ ರಜತ ಸಂಚಿಕೆ ಬಿಡುಗಡೆ
ಕುಲಾಲ ಸಂಘ (ರಿ) ವಿಟ್ಲ ದ ರಜತ ಮಹೋತ್ಸವ ದಂದು ಸಾಂಕೇತಿಕ ಬಿಡುಗಡೆ ಗೊಂಡ ಬೆಳ್ಳಿ ಕುಂಭ ಸ್ಮರಣ ಸಂಚಿಕೆ ಇಂದು ಮಾಣಿಲದಲ್ಲಿ ಪರಮಪೂಜ್ಯ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಗಳ ದಿವ್ಯಹಸ್ತದಿಂದ ಬಿಡುಗಡೆ ಗೊಂಡಿತು.
ಕುಲಾಲ ಸಂಘದ ಸ್ಥಾಪಕಧ್ಯಕ್ಷರಾದ ರಮಾನಾಥ ವಿಟ್ಲ, ಅಧ್ಯಕ್ಷ ಬಾಬು.ಕೆ, ಕೋಶಾಧಿಕಾರಿ ಅಚ್ಚುತ ಕಟ್ಟೆ, ಸಾಂಸ್ಕೃತಿಕ ಕಾರ್ಯದರ್ಶಿ ಸುರೇಶ ವಿಟ್ಲ, ಜತೆ ಕಾರ್ಯದರ್ಶಿ ಅರುಣಾಕರ ಪೆರ್ವಾಜೆ, ಮತ್ತು ಉಪಾಧ್ಯಕ್ಷರು ಮತ್ತು ಸಂಪಾದಕರಾದ ರಾಧಾಕೃಷ್ಣ ಎರುಂಬು ಉಪಸ್ಥಿತರಿದ್ದರು. ಪರಮಪೂಜ್ಯ ಸ್ವಾಮಿಗಳವರು ಸಂಘದ ಬೆಳವಣಿಗೆಯನ್ನು ಶ್ಲಾಘಿಸಿದರು.




