ಪುತ್ತೂರು ತಾಲೂಕಿನಲ್ಲಿ ಭಾರೀ ಮಳೆಗೆ ಹಲವು ಮನೆಗಳ ಮೇಲೆ ಗುಡ್ಡ ಕುಸಿತ – ಜನರ ಸ್ಥಳಾಂತರ: ಧರೆ ಕುಸಿದು ಶಾಸಕ ಅಶೋಕ್ ರೈ ಮನೆಯ ದನ ಮೃತ್ಯು
ಪುತ್ತೂರು ತಾಲೂಕಿನ ಬೆಳ್ಳಿಪ್ಪಾಡಿ ಗ್ರಾಮದಲ್ಲಿ ಹಲವು ಕಡೆ ಭೀಕರ ಭೂಕುಸಿತವಾಗಿದೆ. ರಣಭೀಕರ ಮಳೆಯಿಂದಾಗಿ ಪುತ್ತೂರು ಶಾಸಕ ಅಶೋಕ್ ರೈಯವರ ಕೋಡಿಂಬಾಡಿ ರೈ ಎಸ್ಟೇಟ್ ನಲ್ಲಿ ಗುಡ್ಡ ಕುಸಿದು ಹಟ್ಟಿಯಲ್ಲಿದ್ದ ಒಂದು ದನ ಮೃತಪಟ್ಟಿದೆ.
ಬೆಳ್ಳಿಪ್ಪಾಡಿ-ಕಠಾರ-ಕೋಟೆಲು ಭಾಗಕ್ಕೆ ಸಂಪರ್ಕಿಸುವ ಸಕಲೇಶ್ವರ ದೇವಸ್ಥಾನದ ಬಳಿಯ ಗುತ್ತಿನಮನೆ ಎಂಬಲ್ಲಿ ರಸ್ತೆಗೆ ಧರೆ ಕುಸಿದುಬಿದ್ದು ಸಂಪರ್ಕ ಕಡಿತವಾಗಿದೆ. ಮೇಲ್ಭಾಗದಲ್ಲಿ ಎರಡು ಮನೆಗಳು ತೀರ ಅಪಾಯಕಾರಿ ಸ್ಥಿತಿಯಲ್ಲಿವೆ.
ಕಳೆದ ವರ್ಷ ಮಳೆಗಾಲದಲ್ಲೂ ಬೆಳ್ಳಿಪ್ಪಾಡಿಯಲ್ಲಿ ಭಾರಿ ದುರಂತ ಸಂಭವಿಸಿತ್ತು.





