December 16, 2025

ಮಂಗಳೂರು: ರೈಲಿನ ಸರಪಳಿ ಎಳೆದ ಪ್ರಯಾಣಿಕನಿಗೆ ಬಿತ್ತು ದಂಡ

0
image_editor_output_image802349140-1747207290962

ಮಂಗಳೂರು: ಸೀಟಿಗಾಗಿ ಇಬ್ಬರು ಪ್ರಯಾಣಿಕರ ನಡುವೆ ನಡೆದ ಜಗಳವು ಅತಿಯಾದ ಕೋಪಕ್ಕೆ ತಿರುಗಿ ಬಳಿಕ ರೈಲಿನ ತುರ್ತು ಸರಪಳಿಯನ್ನು ಎಳೆದು ರೈಲನ್ನು ನಿಲ್ಲಿಸಿದ ಘಟನೆ ಸುಬ್ರಹ್ಮಣ್ಯದಿಂದ ಹೊರಟ ಪ್ಯಾಸೆಂಜರ್ ರೈಲಿನಲ್ಲಿ ನಡೆದಿದೆ.

ರೈಲು ಬಂಟ್ವಾಳ ಬಳಿ ತಲುಪಿದಾಗ ಸೀಟಿಗಾಗಿ ಇಬ್ಬರ ನಡುವೆ ಜಗಳ ನಡೆದಿದೆ. ಅಲ್ಲದೇ ರೈಲಿನಲ್ಲಿ ಜನರ ಸಂಖ್ಯೆಯು ಕೂಡ ಹೆಚ್ಚು ಇತ್ತು. ಹೀಗಾಗಿ ಸೀಟಿಗಾಗಿ ನಡೆದ ಜಗಳದಲ್ಲಿ ರೈಲಿನ ತುರ್ತು ಸರಪಳಿಯನ್ನು ಎಳೆದ ಪ್ರಯಾಣಿಕನಿಗೆ ರೈಲ್ವೆ ರಕ್ಷಣಾ ಪಡೆ (ಆರ್‌ಪಿಎಫ್) 1,500 ರೂ. ದಂಡ ವಿಧಿಸಿದೆ.

ರೈಲ್ವೆ ಅಧಿಕಾರಿಗಳು ತಕ್ಷಣ ಮಧ್ಯಪ್ರವೇಶಿಸಿ ಘಟನೆಯ ಬಗ್ಗೆ ಮಾಹಿತಿ ಪಡೆದರು. ಮಂಗಳೂರು ಜಂಕ್ಷನ್ ತಲುಪಿದ ನಂತರ, ಆರ್‌ಪಿಎಫ್ ಅಧಿಕಾರಿಗಳು ಸರಪಳಿ ಎಳೆದ ವ್ಯಕ್ತಿಯನ್ನು ಗುರುತಿಸಿ, ವಿಚಾರಣೆ ನಡೆಸಿ, 1,500 ರೂ. ದಂಡ ವಿಧಿಸಿ, ಇಂತಹ ಕೃತ್ಯಗಳನ್ನು ಪುನರಾವರ್ತಿಸದಂತೆ ಎಚ್ಚರಿಕೆ ನೀಡಿದರು.

Leave a Reply

Your email address will not be published. Required fields are marked *

error: Content is protected !!