ವಿಟ್ಲ: ವಿಟ್ಲ ಮುಸ್ಲಿಂ ಒಕ್ಕೂಟ ವತಿಯಿಂದ ಕೇಂದ್ರ ಸರಕಾರ ಜಾರಿಗೆ ತಂದ ವಕ್ಫ್ ತಿದ್ದುಪಡಿ ಬಗ್ಗೆ ಮಾಹಿತಿ ಕಾರ್ಯಾಗಾರ ವಕ್ಫ್ ತಿದ್ದುಪಡಿಯಲ್ಲಿ ಏನಿದೆ? ಕಾರ್ಯಕ್ರಮ ಏಪ್ರಿಲ್ 22ರ ಮಂಗಳವಾರ ಸಂಜೆ ವಿಟ್ಲ ದ ಬ್ರೈಟ್ ಆಡಿಟೋರಿಯಂ ನಲ್ಲಿ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ಖ್ಯಾತ ಅಂಕಣಗಾರ, ಚಿಂತಕ ಶಿವಸುಂದರ ಬೆಂಗಳೂರು ಮಾಹಿತಿ ನೀಡಲಿದ್ದಾರೆ.