ವಿಟ್ಲ: ಮುಖ್ಯಮಂತ್ರಿ ಪದಕ ಪುರಸ್ಕೃತ ಇನ್ಸ್ಪೆಕ್ಟರ್ ನಾಗರಾಜ್ ರವರಿಗೆ ಗೌರವಾರ್ಪಣೆ
ವಿಟ್ಲ: ಮುಖ್ಯಮಂತ್ರಿ ಪದಕ ಪುರಸ್ಕೃತ ವಿಟ್ಲ ಇನ್ಸ್ಪೆಕ್ಟರ್ ಹೆಚ್.ಇ.ನಾಗರಾಜ್ ರವರನ್ನು ವಿಟ್ಲ ನಾಗರಿಕರು ಪೊಲೀಸ್ ಠಾಣೆಯಲ್ಲಿ ಗೌರವಿಸಿದರು.
ಲಯನ್ಸ್ ಕ್ಲಬ್ ನ ಪ್ರಾಂತೀಯ ನಿಕಟಪೂರ್ವ ಅಧ್ಯಕ್ಷ ಸುದರ್ಶನ ಪಡಿಯಾರ್, ವಿಟ್ಲ ವರ್ತಕರ ಸಂಘದ ಉಪಾಧ್ಯಕ್ಷ ವಿ.ಎಸ್.ಇಬ್ರಾಹಿಂ, ವಿಟ್ಲ ಸಿಟಿ ಲಯನ್ಸ್ ಕ್ಲಬ್ ನ ಕೋಶಾಧಿಕಾರಿ ದಿನಕರ ಆಳ್ವ, ಲಯನ್ಸ್ ವಲಯ ಅಧ್ಯಕ್ಷ ಸಂದೇಶ್ ಶೆಟ್ಟಿ ಬಿಕ್ನಾಜೆ, ಭಾಸ್ಕರ ರೈ ಇಂಜಿನಿಯರ್, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಸದಸ್ಯ ಅಬೂಬಕರ್ ಅನಿಲಕಟ್ಟೆ ಮುಂತಾದವರು ನಿಯೋಗದಲ್ಲಿದ್ದರು.




