March 14, 2025

ಬೆಳ್ತಂಗಡಿ: ಗೇರುತೋಟದಲ್ಲಿ ವ್ಯಕ್ತಿ ಆತ್ಮಹತ್ಯೆ

0

ಗೇರುಕಟ್ಟೆ : ಕಲ್ಲೇರಿ ಶಿವಗಿರಿ ಸಮೀಪದ ರವಿ ಯಾನೆ ವಾಸುದೇವ ನಾಯ್ಕ (44)ರವರು ಗೇರುಕಟ್ಟೆ ಸಮೀಪದ ಖಾಸಗಿ ವ್ಯಕ್ತಿಯೊಬ್ಬರ ಗೇರುತೋಟದಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ.

ಮೃತ ವ್ಯಕ್ತಿ ಕಲ್ಲೇರಿ ಶಿವಗಿರಿ ಹಾಗೂ ಗೇರುಕಟ್ಟೆ ಸಮೀಪದ ರಸ್ತೆ ಬದಿಯಲ್ಲಿ ಇರೋಲು ವ್ಯಾಪಾರ ವಹಿವಾಟು ನಡೆಸುತ್ತಿದ್ದರು. ವ್ಯಾಪಾರದಲ್ಲಿ ಆರ್ಥಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದರು ಎಂದು ಸಂಬಂಧಿಕರು ತಿಳಿಸಿದರು. ವಿಷಯ ತಿಳಿದು ಬೆಳ್ತಂಗಡಿ ಆರಕ್ಷಕ ಠಾಣೆ ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ ಹೆಚ್ಚಿನ ಮಾಹಿತಿ ತಿಳಿದು ಬಂದಿಲ್ಲ.

 

 

Leave a Reply

Your email address will not be published. Required fields are marked *

error: Content is protected !!