March 5, 2026

ಪರೀಕ್ಷೆಯಲ್ಲಿ ನಕಲು ಮಾಡಿ ಸಿಕ್ಕಿಬಿದ್ದ ವಿದ್ಯಾರ್ಥಿನಿ ಮನನೊಂದು ಕೆರೆಗೆ ಹಾರಿ ಆತ್ಮಹತ್ಯೆ

0
image_editor_output_image1609822015-1740948655561.jpg

ಮುಧೋಳ: ಪರೀಕ್ಷೆಯಲ್ಲಿ ನಕಲು ಮಾಡಿ ಸಿಕ್ಕಿಬಿದ್ದ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಗೆ ಕಾಲೇಜು ಸಿಬ್ಬಂದಿ ಪೋಷಕರ ಎದುರೇ ಬೈದು ಬುದ್ಧಿವಾದ ಹೇಳಿದಕ್ಕೆ‌‌ ಮನನೊಂದ ವಿದ್ಯಾರ್ಥಿನಿ‌ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದಲ್ಲಿ ನಡೆದಿದೆ.

ನಗರದ ಹಿರೇಕೆರಿಗಲ್ಲಿ ನಿವಾಸಿ ತೇಜಸ್ವಿನಿ‌ ದೊಡ್ಡಮನಿ (16) ಆತ್ಮಹತ್ಯೆಗೆ ಶರಣಾಗಿರುವ ಬಾಲಕಿ.

ಖಾಸಗಿ ಕಾಲೇಜಿನಲ್ಲಿ ಪಿಯುಸಿ ಪ್ರಥಮ ವರ್ಷದ ಪರೀಕ್ಷೆ ವೇಳೆ ನಕಲು ಮಾಡುತ್ತಿರುವುದು ಗಮನಿಸಿದ ಕಾಲೇಜು ಆಡಳಿತ ಮಂಡಳಿ ಈ ಕುರಿತು ಕಾಲೇಜಿನ‌ ಸಿಬ್ಬಂದಿ‌ ಪೋಷಕರ ಎದುರು ತೇಜಸ್ವಿನಿಗೆ ಬೈದ ಪರಿಣಾಮ ಮಾನಸಿಕವಾಗಿ ನೊಂದು ಮಹಾರಾಣಿ‌ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಕುರಿತು ಬಾಲಕಿ ಪೋಷಕರು ಕಾಲೇಜು ಆಡಳಿತ ಮಂಡಳಿ ವಿರುದ್ದ ನಗರ ಠಾಣೆಯಲ್ಲಿ‌ ದೂರು ದಾಖಲಿಸಿದ್ದಾರೆ‌.

Leave a Reply

Your email address will not be published. Required fields are marked *

error: Content is protected !!