ಮಂಜೇಶ್ವರ: ಸಮುದ್ರಕ್ಕೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಪತಿ, ಪತ್ನಿ: ಪತಿ ಸಾವು, ಪತ್ನಿಯನ್ನು ರಕ್ಷಿಸಿದ ಸ್ಥಳೀಯರು

ಮಂಜೇಶ್ವರ: ದಂಪತಿ ಸಮುದ್ರಕ್ಕೆ ಹಾರಿ ಆತ್ಮಹತ್ಯೆಗೈಯಲು ಯತ್ನಿಸಿದ ಘಟನೆ ಶನಿವಾರ ಸಂಜೆ ಮಂಜೇಶ್ವರ ಕುಂಡುಕೊಳಕೆ ಸಮುದ್ರ ತೀರದಲ್ಲಿ ನಡೆದಿದ್ದು, ಈ ಪೈಕಿ ಪತಿ ಸಾವನ್ನಪ್ಪಿದ್ದಾರೆ. ಪತ್ನಿಯನ್ನು ಸ್ಥಳೀಯರು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಮೀಂಜ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಡಂಬಾರು ನೀರೋಲ್ಪೆ ನಿವಾಸಿ, ಹೊಸಂಗಡಿ ಎಸ್.ಎ. ಟೈಲರ್ ಮಾಲಕ ಭಾಸ್ಕರ್ ನೀರೋಲ್ಪೆ (60) ಮೃತಪಟ್ಟವರು.
ಭಾಸ್ಕರ್ ಮೃತದೇಹ ರವಿವಾರ ಅಪರಾಹ್ನ 3 ಗಂಟೆ ವೇಳೆ ಉಪ್ಪಳ ಮುಸೋಡಿ ಅಧಿಕದ ಸಮುದ್ರದಲ್ಲಿ ಪತ್ತೆಯಾಗಿದೆ. ಬೆಳಗ್ಗಿನಿಂದಲೇ ಹುಡುಕಾಡುತ್ತಿದ್ದ ಪೊಲೀಸರು ಮೃತದೇಹವನ್ನು ಪತ್ತೆ ಹಚ್ಚಿ, ಬೋಟ್ನ ಮೂಲಕ ದಡಕ್ಕೆ ತಂದು ಮರಣೋತ್ತರ ಪರೀಕ್ಷೆಗಾಗಿ ಮಂಗಲ್ಪಾಡಿ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.