ಬೆಳ್ತಂಗಡಿ: ಕಳಚಿ ಬಿದ್ದ ಸರಕಾರಿ ಬಸ್ ನ ಹಿಂಬದಿಯ ಎರಡು ಚಕ್ರಗಳು
ಬೆಳ್ತಂಗಡಿ: ಉಜಿರೆಯಿಂದ ಬೆಳ್ತಂಗಡಿ ಕಡೆಗೆ ಹೋಗುತ್ತಿದ್ದ ಸರ್ಕಾರಿ ಬಸ್ಸಿನ ಹಿಂಬದಿಯ ಎರಡು ಚಕ್ರ ಕಳಚಿ ರಸ್ತೆಗೆ ಬಿದ್ದ ಘಟನೆ ಉಜಿರೆಯ ಟಿ.ಬಿ ಕ್ರಾಸ್ನ ಕುಂಟಿನಿ ಬಳಿ ನಡೆದಿದೆ.
ಜ.30 ರಂದು ಬೆಳಿಗ್ಗೆ ಈ ಘಟನೆ ಕಾಣಿಸಿಕೊಂಡಿದ್ದು, ಬಳಿಕ ಬಸ್ಸಿನ ಚಾಲಕ ಮತ್ತು ಕಂಡೆಕ್ಟರ್ ಸೇರಿ ರಸ್ತೆ ಬದಿಯ ಮಣ್ಣನ್ನು ಹಾರೆಯಿಂದ ಅಗೆದು ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು.
ಘಟನೆಯ ವೇಳೆ ಪ್ರಯಾಣಿಕರಿಗೆ ಯಾವೂದೇ ರೀತಿಯ ತೊಂದರೆಯಾಗಿಲ್ಲ.





