ಪುತ್ತೂರು: ಕೋಣೆಯಲ್ಲಿ ಚಿಲಕ ಹಾಕಿ ಬಾಕಿಯಾದ ಮಗು:
ಅಗ್ನಿಶಾಮಕ ದಳದಿಂದ ರಕ್ಷಣೆ
ಪುತ್ತೂರು: ಮಗುವೊಂದು ವೈದ್ಯರ ಕೊಠಡಿಯೊಳಗೆ ಚಿಲಕ ಹಾಕಿಕೊಂಡಿದ್ದು, ಕರೆದರೂ ಸ್ಪಂದಿಸದಿದ್ದ ಕಾರಣ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬಾಗಿಲಿನ ಲಾಕ್ ಮುರಿದು ಕೊಠಡಿಯೊಳಗೆ ಪ್ರವೇಶ ಮಾಡಿದ ಘಟನೆ ಡಿ. 18ರಂದು ಪುತ್ತೂರಿನ ಕಲ್ಲಾರೆಯ ಖಾಸಗಿ ಬಿಲ್ಡಿಂಗ್ನಲ್ಲಿ ನಡೆದಿದೆ.
ವೈದ್ಯರ ಮಗುವೊಂದು ಚಿಲಕ ಹಾಕಿ ವೈದ್ಯರ ಕೊಠಡಿಯೊಳಗೆ ಮಲಗಿದ್ದು, ಕರೆದರೂ ಸ್ಪಂದಿಸದೇ ಇದ್ದಾಗ ಗಾಬರಿಗೊಂಡ ವೈದ್ಯರು ಅಗ್ನಿಶಾಮಕ ದಳದ ಸಿಬ್ಬಂದಿಗೆ ಮಾಹಿತಿ ತಿಳಿಸಿದ್ದು, ಅವರು ಆಗಮಿಸಿ ಕೊಠಡಿಯ ಲಾಕ್ ಮುರಿದು ಒಳಗೆ ಪ್ರವೇಶಿಸಲು ಅನುವು ಮಾಡಿಕೊಟ್ಟರು.




