ಕಾರ್ಕಳ: ಅಕ್ರಮ ಮರಳು ಸಾಗಾಟ, ಪೊಲೀಸರ ಕರ್ತವ್ಯಕ್ಕೆ ಅಡ್ಡಿ: ಆರೋಪಿಯ ವಶಕ್ಕೆ
ಕಾರ್ಕಳ: ಕುಕ್ಕುಂದೂರು ಸರ್ವಜ್ಞ ಸರ್ಕಲ್ ಬಳಿ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಲಾರಿ ತಪ್ಪಿಸಿಕೊಳ್ಳಲು ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪಿಯನ್ನು ಕಾರು ಸಹಿತ ವಶಪಡಿಸಿಕೊಂಡಿದ್ದಾರೆ.
ಕುಕ್ಕುಂದೂರು ನಿವಾಸಿ ಸೈಯದ್ ಸೈಫ್ (22) ಬಂಧಿತ ಆರೋಪಿ.
ಜ.3 ರಂದು ಕಾರ್ಕಳ ನಗರ ಠಾಣೆ ಪೊಲೀಸ್ ಉಪ ನಿರೀಕ್ಷಕ ಸಂದೀಪ್ ಕುಮಾರ್ ಶೆಟ್ಟಿ ವಾಹನ ತಪಾಸಣೆ ನಡೆಸುತ್ತಿದ್ದಾಗ ಟಿಪ್ಪರ್ ಲಾರಿಯಲ್ಲಿ ಮರಳನ್ನು ಕಳವು ಮಾಡಿಕೊಂಡು ಸಾಗಾಟ ಮಾಡುತ್ತಿದ್ದು, ಕಳವು ಮಾಡಿದ ಮರಳನ್ನು ತಪ್ಪಿಸಿಕೊಂಡು ಹೋಗಲು ಅನುಕೂಲವಾಗುವಂತೆ ಇಲಾಖಾ ವಾಹನಕ್ಕೆ ಪ್ರತಿಬಂಧ ಉಂಟು ಮಾಡಿದ್ದನು.
ಕಾರಿನಲ್ಲಿ ಮರಳು ಸಾಗಾಟದ ಲಾರಿಗೆ ಬೆಂಗಾವಲಿನಂತೆ ಚಲಾಯಿಸಿದ್ದು, ಟಿಪ್ಪರ್ ನ್ನು ಪೊಲೀಸರು ಬೆನ್ನಟ್ಟುವಾಗ ಒಮ್ಮೆಲೇ ಇಲಾಖಾ ವಾಹನ ಮುಂದೆ ಚಲಾಯಿಸಿಕೊಂಡು ಹೋಗಿ ಇಲಾಖಾ ವಾಹನ ಮುಂದೆ ಹೋಗದಂತೆ ತಡೆಯುಂಟು ಮಾಡಿದ್ದಾನೆ.




