ಕುಕ್ಕರಬೆಟ್ಟು: ನಾಅತೇ ಶರೀಫ್ ಕಾರ್ಯಕ್ರಮ
ವಿಟ್ಲ: ಕುಕ್ಕರಬೆಟ್ಟು ಸೆಕ್ಸೆಸ್ ಬ್ರದರ್ಸ್ ಮತ್ತು ದೌಲತ್ ಬಾಯ್ಸ್ ಮಿತ್ತೂರು ವತಿಯಿಂದ ನಾಅತೇ ಶರೀಫ್ ಕಾರ್ಯಕ್ರಮ ನಡೆಯಿತು.
ಮಿತ್ತೂರು ಕುಕರಬೆಟ್ಟು ಹಸೈನಾರ್ ಹಾಜಿ ವೇದಿಕೆ ಯಲ್ಲಿ ನಡೆದಂತಹ ಇಶ್ಕೆ ಮದೀನಾ ಕಾರ್ಯಕ್ರಮವು ಅಭೂತಪೂರ್ವಕವಾಗಿ ಯಶಸ್ಸನ್ನು ಕಂಡಿದೆ.

ಯಾಹ್ಯ ತಂಗಳ್ ಪೋಲ್ಯ ದುವಾಃ ಆಶೀರ್ವಚನ ನೀಡಿದರು. ದೌಲತ್ ಬಾಯ್ಸ್ ನ ಗೌರವ ಅಧ್ಯಕ್ಷ ಮಿತ್ತೂರು ಹಕೀಮ್ ಹಕ್ ಕಂದಕ್ ಸ್ವಾಗತಿದರು. ಮಿತ್ತೂರು ಸಿರಾಜುಲ್ ಹುದಾ ಮಸೀದಿ ಯ ಖತೀಬರು ಉದ್ಘಾಟಿದರು.
ಮಿತ್ತೂರು ಸಿರಾಜುಲ್ ಹುದಾ ಜುಮ್ಮಾ ಮಸೀದಿಯ ಅಧ್ಯಕ್ಷರು ಸಲೀಂ ಕೆ.ಬಿ, ಸಿರಾಜುಲ್ ಹುದಾ ಸ್ವಲಾತ್ ಯಂಗ್ ಮೆನ್ಸ್ ಅಧ್ಯಕ್ಷ ಖ್ಯಾತ ಉದ್ಯಮಿ ಮುಹಮ್ಮದ್ ಶರೀಫ್ ಕಂದಕ್, ಸಿರಾಜುಲ್ ಹುದಾ ಮಸೀದಿಯ ಮಾಜಿ ಅಧ್ಯಕ್ಷರು ಖ್ಯಾತ ಉದ್ಯಮಿ ಅಹ್ಮದ್ ಹಾಜಿ ಕೆ ಬಿ, ಸಿರಾಜುಲ್ ಹುದಾ ಮದರಸ ಸಮೀತಿ ಅಧ್ಯಕ್ಷರು ಖ್ಯಾತ ಉದ್ಯಮಿ ಸಿರಾಜ್ ಕೆ ಬಿ ಉಪಸ್ಥಿತರಿದ್ದರು.




