ಬಂಟ್ವಾಳ: ಬರಮಾರು ನೇತ್ರಾವತಿ ನದಿಯಲ್ಲಿ ಅಂಬಿಗ ದಿವಾಕರ ನಾಪತ್ತೆ

ಬಂಟ್ವಾಳ: ನೇತ್ರಾವತಿ ನದಿಯಲ್ಲಿ ಜನರನ್ನು ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಾಗಿಸುವ ದೋಣಿ ನಡೆಸುವ ಅಂಬಿಗನೋರ್ವ ನಾಪತ್ತೆಯಾಗಿದ್ದು, ಸ್ಥಳೀಯರು ಹುಡುಕಾಟ ನಡೆಸುತ್ತಿರುವ ಬಗ್ಗೆ ಜ.3ರ ಶುಕ್ರವಾರ ಮಾಹಿತಿ ಲಭ್ಯವಾಗಿದೆ.
ಬರಮಾರು ನೇತ್ರಾವತಿ ನದಿಯಲ್ಲಿ ಅಂಬಿಗ ದಿವಾಕರ ನಾಪತ್ತೆಯಾಗಿದ್ಧಾರೆ.
ಬಂಟ್ವಾಳ ತಾಲೂಕಿನ ಬರಿಮಾರು ಕಡವಿನಬಾಗಿಲು ನಿವಾಸಿ ದಿವಾಕರ ನಾಪತ್ತೆಯಾದವರು.
ದಿವಾಕರ ಅವರು ಕಳೆದ ಸುಮಾರು 30 ವರ್ಷಗಳಿಂದ ನೇತ್ರಾವತಿ ನದಿಯಲ್ಲಿ ಜನರ ಪಾಲಿಗೆ ಸೇತುವೆಯಾಗಿದ್ದು, ಕೆಲಸ ಮಾಡಿಕೊಂಡಿದ್ದು, ನುರಿತ ಈಜುಗಾರರಾಗಿದ್ದರು.