ವಿಟ್ಲ : ಲೌವ್ಲೀ ಫ್ರೆಂಡ್ಸ್ ವತಿಯಿಂದ ಹನೀಫ್ ಹಾಜಿ, ಅಬೂಬಕರ್ ಪುತ್ತು ಹಾಗೂ ಅಬೂಬಕರ್ ಅನಿಲಕಟ್ಟೆ ಗೆ ಸನ್ಮಾನ.
ವಿಟ್ಲ: ವಿಟ್ಲದ ಲೌವ್ಲೀ ಫ್ರೆಂಡ್ಸ್ ವತಿಯಿಂದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಸಮಾಜ ಸೇವಕ ಹನೀಫ್ ಹಾಜಿ ಗೋಳ್ತಮಜಲು,ಜೋಗಿಬೆಟ್ಟು ರಿಫಾಯಿ ಜುಮಾ ಮಸೀದಿ ಅಧ್ಯಕ್ಷರಾಗಿ ಆಯ್ಕೆಯಾದ ಉದ್ಯಮಿ ಅಬೂಬಕರ್ ಪುತ್ತು ಉಪ್ಪಿನಂಗಡಿ ಹಾಗೂ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಸದಸ್ಯರಾಗಿ ಆಯ್ಕೆಗೊಂಡ ಲೇಖಕ ಅಬೂಬಕರ್ ಅನಿಲಕಟ್ಟೆ ಇವರನ್ನು ಸಂಘಟನೆಯ ಕಚೇರಿಯಲ್ಲಿ ಸನ್ಮಾನಿಸಲಾಯಿತು.
ಈ ಸಂದರ್ಭ ಬಂಟ್ವಾಳ ತಾಲೂಕು ಜಂ ಇಯ್ಯತುಲ್ ಫಲಾಹ್ ಅಧ್ಯಕ್ಷ ರಶೀದ್ ವಿಟ್ಲ, ಉಧ್ಯಮಿ ರಫೀಕ್ ಹಾಜಿ ಕಲ್ಲಡ್ಕ,ಯುವ ಮುಂದಾಳು ಶಾಕಿರ್ ಅಳಕೆಮಜಲು, ಕಲಂದರ್ ಪರ್ತಿಪ್ಪಾಡಿ , ಸಾಮಾಜಿಕ ಕಾರ್ಯಕರ್ತರಾದ ಆಶಿಕ್ ಕುಕ್ಕಾಜೆ,ಕಂಬಳಬೆಟ್ಟು ಜನಪ್ರಿಯ ಸೆಂಟ್ರಲ್ ಸ್ಕೂಲ್ ನ ಟ್ರಸ್ಟಿ ನೌಶೀನ್ ಬದ್ರಿಯಾ, ಯುವ ಉಧ್ಯಮಿ ಉಬೈದ್ ವಿಟ್ಲ ಬಝಾರ್ ,ಮಹಮ್ಮದ್ ಕುಂಞು ಟೋಪ್ಕೋ ಮುಂತಾದವರು ಉಪಸ್ಥಿತರಿದ್ದರು


