December 16, 2025

ಉಡುಪಿ: ಬೈಲಕೆರೆ ವಿದ್ಯೋದಯ ಶಾಲೆಯ ಪಕ್ಕ ತೋಡಿನಲ್ಲಿ ಅಪರಿಚಿತ ಶವ ಪತ್ತೆ

0
image_editor_output_image-1151349061-1730976783749.jpg

ಉಡುಪಿ ಜಿಲ್ಲೆಯ ಬೈಲಕೆರೆ ವಿದ್ಯೋದಯ ಶಾಲೆಯ ಪಕ್ಕ ಇಂದ್ರಣಿ ತೋಡಿ(ಕಾಲುವೆ)ನಲ್ಲಿ ಅಪರಿಚಿತ ಶವ ಪತ್ತೆಯಾಗಿದ್ದು, ಮೃತದೇಹ ಕೊಳೆತ ಸ್ಥಿತಿಯಲ್ಲಿದೆ.

ಅಪರಿಚಿತ ಪುರುಷನ ಮೃತದೇಹದ ಕುರಿತು ಸ್ಥಳೀಯ ಸುನಿಲ್ ಬೈಲಕೆರೆಯವರು ಸಮಾಜಸೇವಕ ನಿತ್ಯಾನಂದ ಒಳಕಾಡು ಅವರಿಗೆ ಕರೆ ಮಾಡಿ ತಿಳಿಸಿದ್ದಾರೆ. ಬಳಿಕ ನಿತ್ಯಾನಂದ ಅವರು ಕೂಡಲೇ ಬಂದು ತೋಡಿನಲ್ಲಿ ಬಿದ್ದಿದ್ದ ಕೊಳೆತ ಸ್ಥಿತಿಯಲ್ಲಿದ್ದ ಶವವನ್ನು ಮೇಲಕ್ಕೆ ಎತ್ತಿದ್ದಾರೆ.

ನಗರ ಠಾಣೆಯ ಎಎಸ್‌ಐ ನವೀನ್ ದೇವಾಡಿಗ, ಹೆಡ್ ಕಾನ್ಸ್‌ಟೆಬಲ್ ತಾರಾನಾಥ್ ಕಾನೂನು ಪ್ರಕ್ರಿಯೆ ನಡೆಸಿದ್ದು, ಶವಾಗರಕ್ಕೆ ಕೊಂಡು ಹೋಗಲು ಒಳಕಾಡು ಹಾಗೂ ಉಮೇಶ ಬೈಲಕೆರೆ ಸಹಕರಿಸಿದರು.

ಅಪರಿಚಿತ ಮೃತದೇಹದ ಸಂಬಂಧಿಕರು ಉಡುಪಿ ಜಿಲ್ಲಾಸ್ಪತ್ರೆಯನ್ನು ಸಂಪರ್ಕಿಸಲು ಸೂಚಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!