ವಿಟ್ಲ: ಅ.25ರಿಂದ 27ರ ವರೆಗೆ ಒಕ್ಕೆತ್ತೂರು ಬದ್ರಿಯಾ ಜುಮ್ಮಾ ಮಸೀದಿ ವತಿಯಿಂದ 69ನೇ ಕುತುಬಿಯ್ಯತ್ ವಾರ್ಷಿಕೋತ್ಸವದ ಪ್ರಯುಕ್ತ ಮತ ಪ್ರಭಾಷಣ
ವಿಟ್ಲ: ಒಕ್ಕೆತ್ತೂರು ಬದ್ರಿಯಾ ಜುಮ್ಮಾ ಮಸೀದಿ ಇದರ 69ನೇ ಖುತುಬಿಯ್ಯತ್ ವಾರ್ಷಿಕೋತ್ಸವದ ಪ್ರಯುಕ್ತ 3 ದಿನದ ಮತಪ್ರಭಾಷಣ ಕಾರ್ಯಕ್ರಮ ಅಕ್ಟೋಬರ್ 25ರಿಂದ 27ರ ವರೆಗೆ ಒಕ್ಕೆತ್ತೂರು ಮಸೀದಿ ವಠಾರದಲ್ಲಿ ನಡೆಯಲಿದೆ.
ಅ.25ರಂದು ಮಧ್ಯಾಹ್ನ ಮುಹಿಯಿದ್ದೀನ್ ರಾತೀಬು ಮತ್ತು ರಾತ್ರಿ ಜಬ್ಬಾರ್ ಸಖಾಫಿ ಪಾತೂರು ಮುಖ್ಯ ಪ್ರಭಾಷಣ ಮಾಡಲಿದ್ದಾರೆ. ಅ.26ರಂದು ಒಕ್ಕೆತ್ತೂರು ಖತೀಬು ಮುಹಮ್ಮದ್ ರಫೀಕ್ ಅಹ್ಸನಿ ಮತ್ತು ಅ.27ರಂದು ಸಂಜೆ ಕುತುಬಿಯ್ಯತ್ ನಡೆಯಲಿದೆ ಬಳಿಕ ಸಯ್ಯಿದ್ ಎನ್.ಪಿ.ಎಂ ಜಲಾಲುದ್ದೀನ್ ತಂಙಳ್ ಅಲ್ ಬುಖಾರಿ ಕುನ್ನುಂಗೈ ಅವರು ದುವಾಃ ಮತ್ತು ಮುಖ್ಯ ಪ್ರಭಾಷಣ ಮಾಡಲಿದ್ದಾರೆ.


