May 16, 2026

ಕಾಸರಗೋಡು: ಕಾರು, ಸ್ಕೂಟರ್ ನಡುವೆ ಢಿಕ್ಕಿ: ಯುವಕ ಮೃತ್ಯು

0
image_editor_output_image-1949692801-1726466878695.jpg

ಕಾಸರಗೋಡು: ಕಾರು ಮತ್ತು ಸ್ಕೂಟರ್ ಢಿಕ್ಕಿ ಹೊಡೆದು ಯುವಕನೋರ್ವ ಮೃತಪಟ್ಟು, ಸಹ ಸವಾರನಿಗೆ ಗಾಯವಾದ ಘಟನೆ ಬೇಕಲ ಠಾಣಾ ವ್ಯಾಪ್ತಿಯ ಬಟ್ಟತ್ತೂರು ನೆಲ್ಲಿಕಟ್ಟೆ ಎಂಬಲ್ಲಿ ನಡೆದಿದೆ.

ಕೋಟಿಕುಳಂನ ಸಿದ್ದಾರ್ಥ್ (23) ಮೃತ ಯುವಕ. ಸಹ ಸವಾರ ವೈಷ್ಣವ್ (22) ಗಾಯಗೊಂಡಿದ್ದಾರೆ.

ಗಂಭೀರ ಗಾಯಗೊಂಡ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಿದರೂ ಸಿದ್ದಾರ್ಥ್ ಎಂಬ ಯುವಕನ ಜೀವ ಉಳಿಸಲಾಗಲಿಲ್ಲ. ವೈಷ್ಣವ್ ನನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಬೇಕಲ ಠಾಣಾ ಪೊಲೀಸರು ಸ್ಥಳ ಮಹಜರು ನಡೆಸಿದರು.

Leave a Reply

Your email address will not be published. Required fields are marked *

error: Content is protected !!