December 19, 2025

ವಿಟ್ಲ: ಜೆಸಿಐ 2024ರ ಸಪ್ತಾಹಕ್ಕೆ ದೈಗೋಳಿ ಸಾಯಿ ನಿಕೆತನದಲ್ಲಿ ಚಾಲನೆ

0
image_editor_output_image52930409-1725894459729

ಜೆಸಿಐ ವಿಟ್ಲ ಇದರ 2024ರ ಸಪ್ತಾಹ ಕಾರ್ಯಕ್ರಮದ ಉದ್ಘಾಟನೆ ದೈಗೋಳಿ ಸಾಯಿ ನಿಕೆತನ ಆಶ್ರಮದಲ್ಲಿ ಜೇಸಿಸ್ ಆಂಗ್ಲ ಮಾಧ್ಯಮ ಶಾಲೆಯ ಅಧ್ಯಕ್ಷರು ಜೆಸಿ ಶ್ರೀಧರ್ ಶೆಟ್ಟಿ ದೀಪ ಬೆಳಗಿಸುವುದರ ಮೂಲಕ ಆರಂಭವಾಯಿತು..

ಕಾರ್ಯಕ್ರಮದ ಅಧ್ಯಕ್ಷೆತೆಯನ್ನು ಜೆಸಿ. ಸಂತೋಷ್ ಶೆಟ್ಟಿ ಪೆಲತಡ್ಕ ವಹಿಸಿಕೊಂಡು,ಮುಖ್ಯ ಅತಿಥಿಗಳಾಗಿ ಪೂರ್ವ ಅಧ್ಯಕ್ಷರು, ರಾಷ್ಟ್ರೀಯ ತರಬೇತುದಾರರಾದ ಹಸನ್ ವಿಟ್ಲ, ಜೆಸಿಐ ವಿಟ್ಲದ ಪೂರ್ವ ಅಧ್ಯಕ್ಷರು, ರೋಟರಿ ಕ್ಲಬ್ ವಿಟ್ಲದ ಸ್ಥಾಪಕ ಅಧ್ಯಕ್ಷರು ಆದ ಜೆಸಿ. ಭಾಸ್ಕರ್ ಶೆಟ್ಟಿ, ಆಶ್ರಮದ ಫೌಂಡರ್ ಹಾಗೂ ಟ್ರಸ್ಟಿ ಉದಯಕುಮಾರ್ ನೂಜಿ ಉಪಸ್ಥಿತರಿದ್ದರು…

ಪೂರ್ವ ಅಧ್ಯಕ್ಷರುಗಳನ್ನು ಸನ್ಮಾನಿಸಿ ಗೌರವಿಸಿಲಾಯಿತು.. ದಾನ್ ಕಾರ್ಯಕ್ರಮ ಅಡಿಯಲ್ಲಿ ಜೆಸಿಐ ವಿಟ್ಲ ವತಿಯಿಂದ ವೀಲ್ ಚೇರ್, ವಾಕರ್ ಹಾಗೂ 150ಕೆಜಿ ಅಕ್ಕಿ ಅನ್ನು ಆಶ್ರಮ ನಿವಾಸಿಗಳಿಗೆ ಹಸ್ಥಾ0ತರಿಸಲಾಯಿತು…ಆಶ್ರಮ ವಾಸಿಗಳಿಗೆ ಯೋಗ ಪಟು ಸಂಜೀವ ಪೂಜಾರಿ ಯೋಗ ತರಬೇತಿಯನ್ನು ನಡೆಸಿಕೊಟ್ಟರು.


ಅತಿಥಿಗಳನ್ನು ಕೋಶಾಧಿಕಾರಿ ಜೆಸಿ. ಲುವಿಸ್ ಮಸ್ಕರೇನಸ್ ವೇದಿಕೆಗೆ ಬರಮಾಡಿಕೊಂಡರು , ಜೆಸಿ. ಆರ್ಥಿಕ್ ವಂದಿಸಿದರು , ಜೆಸಿ. ಮುರಳಿಪ್ರಸಾದ್, ಜೆಸಿ. ರಿತೇಶ್ ಶೆಟ್ಟಿ, ಜೆಸಿ ಹರ್ಷಿತ್, ಜೆಸಿ ರಜತ್ ಆಳ್ವ ಹಾಗೂ ಜೆಸಿ. ಶಿವಾನಿ ಶೆಟ್ಟಿ ಸಹಕರಿಸದರು.

Leave a Reply

Your email address will not be published. Required fields are marked *

You may have missed

error: Content is protected !!