ಪೆರುವಾಯಿ: ಸ್ವಾತಂತ್ರ್ಯೋತ್ಸವ ಪ್ರಯುಕ್ತ ಯುವಕರಿಂದ ಸ್ವಚ್ಛತಾ ಕಾರ್ಯ
ಪೆರುವಾಯಿ: 78ನೇ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಡೆಂಗ್ಯೂ ಮಲೇರಿಯಾ ತಡೆಗಟ್ಟುವ ಸಲುವಾಗಿ ಪೆರುವಾಯಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಬಸ್ಸು ತಂಗುದಾಣವು, ದಿನನಿತ್ಯ ಶಾಲಾ ಮಕ್ಕಳು, ಸಾರ್ವಜನಿಕರು ಉಪಯೋಗಿಸುತ್ತಿದ್ದು, ಇದು ಕೆಲ ಸಮಯಗಳಿಂದ ದುರ್ನಾತ ಬೀರಿ , ಸಾರ್ವಜನಿಕರಿಗೆ ಮುಕ್ತವಾಗಿ ಉಪಯೋಗಿಸಲು ಬಲು ಕಷ್ಟವಾಗಿತ್ತು ಇದನ್ನು ಮನಗಂಡ ಊರಿನ ಯುವಕರು ಸ್ವಚ್ಚ ಮಾಡಿ ತೊಳೆದು ಪ್ರಯಾಣಿಕರು ಸರಿಯಾಗಿ ಉಪಯೋಗಿಸಿಕೊಳ್ಳುವ ರೀತಿಯಲ್ಲಿ ಸಜ್ಜುಗೊಳಿಸಿರುತ್ತಾರೆ.






