ಹುಬ್ಬಳ್ಳಿ: ಸುಲಿಗೆ ಮತ್ತು ಮನೆ ದರೋಡೆಯನ್ನೆ ವೃತ್ತಿಯಾಗಿಸಿಕೊಂಡಿದ್ದ ಕದೀಮನನ್ನು ಉಪನಗರ ಪೊಲೀಸರು ಗುರುವಾರ ತಡರಾತ್ರಿ ಇಲ್ಲಿನ ಎಂಟಿಎಸ್ ಕಾಲೋನಿಯಲ್ಲಿ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ.
ಹಳೇಹುಬ್ಬಳ್ಳಿ ನೇಕಾರನಗರದ ಸೋನು ಊರ್ಫ್ ಅರುಣ ನಾಯ್ಕ ಬಂಧಿತನಾದವ. ಈತನ ಮೇಲೆ 13ಕ್ಕೂ ಹೆಚ್ಚು ದರೋಡೆ, ಸುಲಿಗೆ ಪ್ರಕರಣಗಳಿವೆ.