May 1, 2025

ಬಜಪೆ: ಬೈಕ್ ಸವಾರನ ಮೇಲೆ ಉರುಳಿಬಿದ್ದ ಟೆಂಪೊ, ಬೈಕ್ ಸವಾರ ಮೃತ್ಯು

0

ಬಜಪೆ: ಬೈಕ್ ಸವಾರನ ಮೇಲೆ ಟೆಂಪೊವೊಂದು ಉರುಳಿಬಿದ್ದ ಪರಿಣಾಮ ಬೈಕ್ ಸವಾರ ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 169 ರಲ್ಲಿ ಬಾಮಿ ಶಾಲೆಯ ಸಮೀಪದ ಇಳಿಜಾರು ಪ್ರದೇಶದಲ್ಲಿ ನಡೆದಿದೆ.

ಸುಂಕದಕಟ್ಟೆಯ ಚಾವಂಡಿಪಲ್ಕೆ ನಿವಾಸಿ ಶ್ರೀನಿವಾಸ (54) ಮೃತ ದುರ್ದೈವಿ. ಬುಧವಾರ ಮಧ್ಯಾಹ್ನ ಕೈಕಂಬದಿಂದ ಗುರುಪುರಕ್ಕೆ ಹೋಗುತ್ತಿದ್ದ ಖಾಲಿ ಟೆಂಪೊವೊಂದು ಹೆದ್ದಾರಿ ಬದಿಯ ಹೊಂಡದಲ್ಲಿ ಸಿಲುಕಿತ್ತು ಈ ವೇಳೆ ಟೆಂಪೋ ಚಾಲಕ ಒಮ್ಮೆಲೇ ತೆಗೆಯುವ ವೇಳೆ ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿಯಲ್ಲಿ ಪಲ್ಟಿಯಾಗಿದೆ.

ಈ ವೇಳೆ ಹೆದ್ದಾರಿಯಲ್ಲಿ ಸಾಗುತ್ತಿದ್ದ ಬೈಕ್ ಟೆಂಪೋ ಅಡಿಯಲ್ಲಿ ಸಿಲುಕಿದ್ದು ಗಂಭೀರ ಗಾಯಗೊಂಡ ಶ್ರೀನಿವಾಸ್ ಅವರನ್ನು ಮಂಗಳೂರಿನ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ಅಷ್ಟೋತ್ತಿಗಾಗಲೇ ಶ್ರೀನಿವಾಸ್ ಮೃತಪಟ್ಟಿದ್ದರು ಎಂದು ಹೇಳಲಾಗಿದೆ.

 

 

ಶ್ರೀನಿವಾಸ ಅವರು ಪತ್ನಿ ಮೋಹಿನಿ ಹಾಗೂ ಒರ್ವ ಪುತ್ರನನ್ನು ಆಗಲಿದ್ದಾರೆ. ಶ್ರೀನಿವಾಸ ಅವರು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಏರ್‌ ಇಂಡಿಯಾದಲ್ಲಿ ರ್‍ಯಾಂಪ್‌ ಮೇಲ್ವಿಚಾರಕರಾಗಿ ಕೆಲಸಮಾಡುತ್ತಿದ್ದರು.

ಘಟನೆ ಸಂಬಂಧ ಬಜಪೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!