ಕಲ್ಲಿನಿಂದ ಜಜ್ಜಿ ಯುವಕನ ಹತ್ಯೆ
ವಿಜಯಪುರ: ನಗರದ ಎಪಿಎಂಸಿ ಮಾರುಕಟ್ಟೆ ಪ್ರದೇಶದಲ್ಲಿ ಕಲ್ಲಿನಿಂದ ಜಜ್ಜಿ ಯುವಕನೊಬ್ಬನನ್ನು ಹತ್ಯೆ ಮಾಡಿರುವ ಘಟನೆ ಜರುಗಿದೆ.
ಹತ್ಯೆಯಾದ ಯುವಕನನ್ನು 22 ವರ್ಷದ ಕಂಬಾರ ಓಣಿ ನಿವಾಸಿ ರೋಹಿತ್ ಸುಭಾಶ ಪವಾರ ಎಂದು ಗುರುತಿಸಲಾಗಿದೆ.
ಹತ್ಯೆಯ ಬಳಿಕ ರೋಹಿತ್ ಶವವನ್ನು ಎಪಿಎಂಸಿ ಕುರಿ-ಮೇಕೆ ಮಾರುಕಟ್ಟೆ ಪರಿಸರದ ಮುಳ್ಳಿನ ಪೊದೆಯಲ್ಲಿ ಎಸೆಯಲಾಗಿದೆ.
ಘಟನಾ ಸ್ಥಳದಲ್ಲಿ ಮದ್ಯದ ಬಾಟಲಿಗಳು ಹಾಗೂ ಚಿಪ್ಸ್ ಪಾಕೇಟಗಳು ದೊರೆತಿದ್ದು, ಮದ್ಯ ಸೇವನೆ ಬಳಿಕ ಅಮಲಿನಲ್ಲಿ ಆಪ್ತರೇ ರೋಹಿತ್ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ.




