WhatsAppಗೆ ಬಂದ ಲಿಂಕ್ ಓಪನ್ ಮಾಡಿ 5.18 ಕೋಟಿ ರೂ. ಕಳೆದುಕೊಂಡ ವ್ಯಕ್ತಿ
ಬೆಂಗಳೂರು: ಷೇರು ಹೂಡಿಕೆ ನೆಪದಲ್ಲಿ ನಗರದ ನಿವಾಸಿಯೊಬ್ಬರು 5.18 ಕೋಟಿ ಹಣವನ್ನು ಕಳೆದುಕೊಂಡಿರುವ ಘಟನೆ ವರದಿಯಾಗಿದೆ.
ಸಂಜಯನಗರದ ಅಶೋಕ್ ತಿರುಪಲ್ಲಪ್ಪ ಎಂಬುವರ ವಾಟ್ಸಪ್ಗೆ ವಂಚಕರು ಲಿಂಕ್ನ್ನು ಕಳುಹಿಸಿದ್ದು, ಬಳಿಕ ಲಿಂಕ್ ಓಪನ್ ಮಾಡಿ ಷೇರು ಖರೀದಿಸಿದರೆ ನಿಮಗೆ ಅಧಿಕ ಲಾಭ ಬರುತ್ತದೆ ಎಂದು ನಂಬಿಸಿದ್ದಾರೆ.
ವಂಚಕರ ಬಣ್ಣದ ಮಾತಿಗೆ ಮರುಳಾದ ಅಶೋಕ್ ಲಿಂಕ್ನ್ನು ಓಪನ್ ಮಾಡಿ ಡೌನ್ಲೋಡ್ ಮಾಡಿದ್ದಾರೆ. ಕೆಲವೇ ಕ್ಷಣಗಳಲ್ಲಿ ವಂಚಕರು ಅಶೋಕ್ ಅವರ ಬ್ಯಾಂಕ್ ಖಾತೆಯ ಮಾಹಿತಿಯನ್ನು ಪಡೆದು ಹಂತ ಹಂತವಾಗಿ ಹಣವನ್ನು ದೋಚಿದ್ದಾರೆ.




