December 18, 2025

ಉಪ್ಪಿನಂಗಡಿ: ಯುವಕರ ಮೇಲೆ ತಲವಾರ್ ದಾಳಿ ಪ್ರಕರಣ: ಇಬ್ಬರು ಆರೋಪಿಗಳ ಬಂಧನ

0
IMG-20211206-WA0003.jpg

ಉಪ್ಪಿನಂಗಡಿ: ಅನ್ಯಕೋಮಿನ ತಂಡಗಳ ನಡುವೆ ಹೊಡೆದಾಟ ನಡೆದ ಘಟನೆ ತಡರಾತ್ರಿ ಇಳಂತಿಲ ಗ್ರಾಮದ ಅಂಡೆತ್ತಡ್ಕ ಎಂಬಲ್ಲಿ ನಡೆದಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು, ಇದೀಗ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.

ಬಂಧಿತರನ್ನು ಜಯರಾಮ್ (21), ಶೋಧನ್(21) ಎನ್ನಲಾಗಿದೆ.

ಅಬ್ದುಲ್ ಜಕಾರಿಯಾ ಎಂಬವರು ನೀಡಿದ ದೂರಿನಂತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಡಿ.5 ರಂದು ರಾತ್ರಿ, ಬೆಳ್ತಂಗಡಿ ತಾಲೂಕು ಇಳಂತಿಲ ಗ್ರಾಮದ ಅಂಡೆತ್ತಡ್ಕ ಎಂಬಲ್ಲಿರುವ ಇಕ್ಬಾಲ್ ರವರ ಜಿನಸು ಅಂಗಡಿ ಬಳಿ ಅಬ್ದುಲ್ ಜಕಾರಿಯಾ ಮತ್ತು ಸಿದ್ಧಿಕ್ ನಿಂತಿರುವಾಗ ತಲವಾರು ಮತ್ತು ರಾಡ್ ಗಳನ್ನು ಹಿಡಿದುಕೊಂಡು ಸುಮಾರು 30 ಬೈಕ್ ಗಳಲ್ಲಿ ಬಂದ ಆರೋಪಿಗಳು, ಸಿದ್ಧಿಕ್ಗೆ ತಲವಾರಿನಿಂದ ಮತ್ತು ರಾಡ್ ಹಲ್ಲೆ ನಡೆಸಿದ್ದು ಹಾಗೂ ಅಬ್ದುಲ್ ಜಕಾರಿಯಾ ಮೇಲೆ ಹಲ್ಲೆ ನಡೆಸಿದ್ದು ಮತ್ತು ಅಯೂಬ್ ಮೇಲೆಯೂ ತಲವಾರಿನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ, ಈ ಸಂದರ್ಭದಲ್ಲಿ ಅಸುಪಾಸಿನ ಜನರು ಸೇರುವುದನ್ನು ಕಂಡು ಆರೋಪಿಗಳು ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದರು.

Leave a Reply

Your email address will not be published. Required fields are marked *

error: Content is protected !!