ಮುಡಬಿದಿರೆ: ಜ್ವರದಿಂದ ಕಾರ್ಮೆಲ್ ಶಾಲೆಯ 1ನೇ ತರಗತಿ ವಿದ್ಯಾರ್ಥಿನಿ ಮೃತ್ಯು
ಮುಡಬಿದಿರೆ: ನ್ಯುಮೋನಿಯಾದಿಂದ ಮಂಗಳೂರು ಅತ್ತಾವರ ಕೆ.ಎಂ.ಸಿ ಆಸ್ಪತ್ರೆಯ ತುರ್ತು ನಿಗಾ ವಿಭಾಗದಲ್ಲಿ ದಾಖಲಾಗಿದ್ದ ಶಿರ್ತಾಡಿ ಮೌಂಟ್ ಕಾರ್ಮೆಲ್ ಶಾಲೆಯ ಒಂದನೇ ತರಗತಿ ವಿದ್ಯಾರ್ಥಿನಿ ಆಶ್ರಿಜಾ ಚಿಕಿತ್ಸೆ ಫಲಕಾರಿಯಾಗದೆ ವಿಧಿವಶಳಾಗಿದ್ದಾಳೆ.
ಮರೋಡಿ ಗ್ರಾಮದ ಜಯಾನಂದ – ರಾಜಶ್ರೀ ದಂಪತಿ ಪುತ್ರಿಯಾಗಿರುವ ಆಶ್ರಿಜಾ ನ್ಯುಮೋನಿಯಾದಿಂದಾಗಿ ಆಸ್ಪತ್ರೆ ಸೇರಿದ್ದಳು.
ವಿದ್ಯಾರ್ಥಿನಿಯ ನಿಧನದ ಹಿನ್ನೆಲೆಯಲ್ಲಿ ಶಿಕ್ಷಣ ಸಂಸ್ಥೆಗೆ ಇಂದು ರಜೆ ನೀಡಲಾಗಿದೆ.


