February 2, 2026

ಕೇಂದ್ರ ಬಜೆಟ್- 2024: ಸಬ್‌ ಕಾ ಸಾಥ್‌ ಸಬ್‌ ಕಾ ವಿಕಾಸ್‌ ಘೋಷಣೆಯಡಿ ಅಭಿವೃದ್ಧಿ ಕಾರ್ಯ

0
image_editor_output_image-390590853-1706769498152.jpg

ನವದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು 2024-25ನೇ ಸಾಲಿನ ಮಧ್ಯಂತರ ಬಜೆಟ್‌ ಮಂಡನೆ ಆರಂಭಿಸಿದ್ದು, ದೇಶದಲ್ಲಿ ಉದ್ಯೋಗ ಸೃಷ್ಟಿ, ಮಹಿಳಾ ಸಬಲೀಕರಣ ಸೇರಿದಂತೆ ಸಬ್‌ ಕಾ ಸಾಥ್‌ ಸಬ್‌ ಕಾ ವಿಕಾಸ್‌ ಘೋಷಣೆಯಡಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗಿದೆ ಎಂದು ತಿಳಿಸಿದರು. ಪ್ರಸಕ್ತ ಸಾಲಿನ ಬಜೆಟ್‌ ಮುಖ್ಯಾಂಶ ಇಲ್ಲಿದೆ.
ದೇಶಾದ್ಯಂತ 390 ವಿಶ್ವವಿದ್ಯಾಲಯಗಳನ್ನು ಕೇಂದ್ರ ಆರಂಭಿಸಿದೆ. ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಕ್ರಾಂತಿಕಾರಿ ಬದಲಾವಣೆ, ಮಹಿಳೆಯರಿಗೆ ಮುದ್ರಾ ಯೋಜನೆಯಿಂದ ಲಾಭ. 43 ಕೋಟಿ ಯುವ ಜನರಿಗೆ ಸಾಲ ನೀಡಲಾಗಿದೆ.
3 ಸಾವಿರ ಹೊಸ ಐಐಟಿಯನ್ನು ಸ್ಥಾಪಿಸಲಾಗಿದೆ. ಬಡವರು, ಮಹಿಳೆಯರು, ರೈತರಿಗೆ ಆದ್ಯತೆ ನೀಡಲಾಗಿದೆ. ಮುದ್ರಾ ಯೋಜನೆಯಡಿ 43 ಕೋಟಿ ರೂಪಾಯಿ ಸಾಲ ನೀಡಲಾಗಿದೆ.
ಜನ್‌ ಧನ್‌ ಖಾತೆಗಳಿಗೆ 34 ಕೋಟಿ ರೂಪಾಯಿ ಹಣ ವರ್ಗಾವಣೆ, ಯುವಕರನ್ನು ಸದೃಢಗೊಳಿಸುವುದು ನಮ್ಮ ಸರ್ಕಾರದ ಆದ್ಯತೆಯಾಗಿದೆ.
ಒನ್‌ ನೇಷನ್‌, ಒನ್‌ ಮಾರ್ಕೆಟ್‌ ಜಾರಿ. ಜಿಎಸ್‌ ಟಿ ಜಾರಿಯಿಂದ ಒಂದು ದೇಶ, ಒಂದು ಮಾರುಕಟ್ಟೆಗೆ ಆದ್ಯತೆ, ಮಹಿಳೆಯರ ರಕ್ಷಣೆ ದೃಷ್ಟಿಯಿಂದ ತ್ರಿವಳಿ ತಲಾಖ್‌ ರದ್ದು, 2047ರ ವೇಳೆಗೆ ಅಭಿವೃದ್ಧಿ ಭಾರತವಾಗಿ ಬದಲಾವಣೆ.
ಎನ್‌ ಇಪಿ ಮೂಲಕ ಯುವಕರ ಅಭಿವೃದ್ಧಿಗೆ ಒತ್ತು, ಮುಂದಿನ ಐದು ವರ್ಷದಲ್ಲಿ 3 ಕೋಟಿ ಹೊಸ ಗೃಹ ನಿರ್ಮಾಣ, ದೇಶದಲ್ಲಿ ಭ್ರಷ್ಟಾಚಾರ ಮಟ್ಟ ಹಾಕಲಾಗಿದೆ.
1 ಕೋಟಿ ಮನೆ ಮೇಲೆ ಸೋಲಾರ್‌ ಪ್ಯಾನಲ್‌ ಅಳವಡಿಸಲಾಗಿದೆ. ಆಶಾ ಕಾರ್ಯಕರ್ತೆಯರಿಗೆ ಆಯುಷ್ಮಾನ್‌ ಭಾರತ್‌ ಯೋಜನೆ

Leave a Reply

Your email address will not be published. Required fields are marked *

error: Content is protected !!