ರಾಷ್ಟ್ರ ಮಟ್ಟದ ಟಾರ್ಗೆಟ್ ಬಾಲ್ ನಾರ್ಶ ಶಾಲಾ ವಿದ್ಯಾರ್ಥಿಗಳು ಆಯ್ಕೆ
ವಿಟ್ಲ: ಜನವರಿ 14ರಿಂದ 16ರವರೆಗೆ ತೆಲಂಗಾಣದ ಹೈದರಬಾದ್ ನಲ್ಲಿ ನಡೆಯುವ ರಾಷ್ಟ್ರೀಯ ಮಟ್ಟದ ಟಾರ್ಗೆಟ್ ಬಾಲ್ ಪಂದ್ಯಾಟಕ್ಕೆ ನಾರ್ಶ ಶಾಲೆಯ ವಿದ್ಯಾರ್ಥಿಗಳಾದ ಅಬೂಬಕ್ಕರ್ ಅಫ್ವಾನ್ ಮತ್ತು ಚೇತನ್ ರವರು ಆಯ್ಕೆ ಯಾಗಿದ್ದಾರೆ.
ಇವರಿಗೆ ದೈಹಿಕ ಶಿಕ್ಷಣ ಶಿಕ್ಷಕರಾದ ಅಬ್ದುಲ್ ರಫೀಕ್ ರವರು ತರಬೇತಿ ನೀಡಿದ್ದು ರಾಷ್ಟ್ರಮಟ್ಟದ ಟಾರ್ಗೆಟ್ ಬಾಲ್ ಆಟಗಾರರಾದ ರಾಘವೇಂದ್ರ ಸಾಲೆತ್ತೂರು ಇವರು ರಾಜ್ಯ ತಂಡದ ವ್ಯವಸ್ಥಾಪಕರಾಗಿರುತ್ತಾರೆ.
ಆಯ್ಕೆಯಾದ ವಿದ್ಯಾರ್ಥಿಗಳಿಗೆ ನಾರ್ಶ ಶಾಲಾ ಎಸ್ಡಿಎಂಸಿ ಅಧ್ಯಕ್ಷರಾದ ಹಾಜಿ ಎನ್ ಸುಲೇಮಾನ್ ಸಿಂಗಾರಿ..ಮುಖ್ಯ ಶಿಕ್ಷಕಿಯಾದ ಲತಾ ಕೆ .ಮತ್ತು ಶಿಕ್ಷಕ ವೃಂದದವರು ಅಭಿನಂದಿಸಿದ್ದಾರೆ.





