ಮಂಗಳೂರು: ಎಸ್ ಡಿ ಪಿ ಐ ಮುಖಂಡ ರಿಯಾಝ್ ಕಡಂಬು ಬಂಧನ: ಕಾಂಗ್ರೆಸ್ ಸರಕಾರದ ನಡೆಯ ವಿರುದ್ಧ ಆಕ್ರೋಶ ಹೊರ ಹಾಕಿದ ಕಾರ್ಯಕರ್ತರು
ಮಂಗಳೂರು: ವಿಧಾನ ಸೌಧದಲ್ಲಿ ವಿನಾಯಕ ದಾಮೋದರ್ ಸಾವರ್ಕರ್ ಫೋಟೋ ಅಳವಡಿಕೆ ಸರಿಯಲ್ಲ, ತೆರವುಗೊಳಿಸಬೇಕು ಎಂದು ಆಗ್ರಹಿಸಿ, ಈ ಕುರಿತು ನೀಡಿದ ಹೇಳಿಕೆ ಸಂಬಂಧಿಸಿ ಎಸ್ಡಿಪಿಐ ರಾಜ್ಯ ನಾಯಕ ರಿಯಾಝ್ ಕಡಂಬುರವರನ್ನು ಪೊಲೀಸರು ಬಂಧಿಸಿದ್ದಾರೆ.
ಮಂಗಳೂರಿನ ಎಸ್ಪಿ ಆಫೀಸ್ ಬಳಿ ಬಂಧಿಸಲಾಗಿದೆ ಎಂಬ ಲಭ್ಯವಾಗಿದೆ.
ರಿಯಾಝ್ ವಿಟ್ಲ ಪಡ್ನೂರು ಗ್ರಾಮದ ಕಡಂಬು ನಿವಾಸಿಯಾಗಿದ್ದು, ಎಸ್ಡಿಪಿಐ ಪಕ್ಷದಲ್ಲಿ ರಾಜ್ಯ ಮಟ್ಟದ ನಾಯಕರಾಗಿದ್ದಾರೆ. ಸಂಘ ಪರಿವಾರ ಮತ್ತು ಸರಕಾರದ ವಿರುದ್ಧ ಧ್ವತಿ ಎತ್ತುತ್ತಿದ್ದರು.
ಕಾಂಗ್ರೆಸ್ ಸರಕಾರದಲ್ಲಿ ಪೊಲೀಸರ ನಡೆಗೆ ಎಸ್ಡಿಪಿಐ ಮತ್ತು ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.





