ವಿಟ್ಲ: ಪೆರುವಾಯಿ ಫಾತಿಮಾ ಮಾತೆಯ ದೇವಾಲಯದಲ್ಲಿ ಸಹೋದರತ್ವದ ಭಾನುವಾರ-ಪರಮ ಪ್ರಸಾದ ಮೆರವಣಿಗೆ
ವಿಟ್ಲ: ಫಾತಿಮಾ ಮಾತೆಯ ದೇವಾಲಯ ಮುಚ್ಚಿರ ಪದವು ಪೆರುವಾಯಿಯಲ್ಲಿ ಸಹೋದರತ್ವದ ರವಿವಾರವನ್ನು ಡಿ. ೩ರಂದು ಆಚರಿಸಲಾಯಿತು. ಕಯ್ಯಾರ್ ಚರ್ಚ್ನ ಧರ್ಮಗುರು ವಂ| ವಿಶಾಲ್ ಮೋನಿಸ್ ಅವರು ಬಲಿಪೂಜೆ ನೆರವೇರಿಸಿದರು. ಬಳಿಕ ಸಾರ್ವಜನಿಕವಾಗಿ ಪರಮಪ್ರಸಾದದ ಮೆರವಣಿಗೆ ನಡೆಸಲಾಯಿತು. ಊರಿನ ಹಾಗೂ ದೇಶದ ಅಬ್ಯುದಯ, ಭಕ್ತರ ಕೋರಿಕೆಗಳೊಂದಿಗೆ ವಿಶೇಷ ಪ್ರಾರ್ಥನೆ ನೆರವೇರಿಸಲಾಯಿತು. ಈ ಸಂದರ್ಭ ಚಚ್ ಧರ್ಮಗುರು ವಂ| ಸೈಮನ್ ಡಿಸೋಜ, ಪಾಲನಾ ಮಂಡಳಿ ಉಪಾಧ್ಯಕ್ಷ ಡೆನಿಸ್ ಮೊಂತೇರೊ, ಕಾರ್ಯದರ್ಶಿ ವೈಲೆಟ್ ಕುವೆಲ್ಲೋ, ವಾಳೆಯ ಗುರಿಕಾರರು ಸೇರಿದಂತೆ ಕ್ರೈಸ್ತ ಬಾಂಧವರು ಉಪಸ್ಥಿತರಿದ್ದರು.




