ಲಾಡು ತಯಾರಿಸುವ ಕೇಂದ್ರದಲ್ಲಿ ಬೆಂಕಿ ಅವಘಡ
![](https://prathidina.com/wp-content/uploads/2023/12/image_editor_output_image-137394933-1701498261814.jpg)
ಮೈಸೂರು: ಮಹದೇಶ್ವರ ಬೆಟ್ಟದಲ್ಲಿ ಅಗ್ನಿ ಅವಘಡ ಸಂಭವಿಸಿ ಲಾಡು ತಯಾರಿಸುವ ಕೇಂದ್ರದಲ್ಲಿ ಬೆಂಕಿ ಹೊತ್ತಿ ಉರಿದ ಘಟನೆ ಶುಕ್ರವಾರ ನಡೆಯಿತು.
ಮಧ್ಯಾಹ್ನ 2 ಗಂಟೆ ಸುಮಾರಿಗೆ ಘಟನೆ ನಡೆದಿದೆ. ಲಡ್ಡು ತಯಾರಿಸುವ ಓವನ್ಗೆ ಸಂಪರ್ಕ ಕಲ್ಪಿಸಿದ್ದ ಅಡುಗೆ ಮನೆಯ ಹೊರಭಾಗದಲ್ಲಿ ಇರಿಸಲಾಗಿದ್ದ ಸಿಲಿಂಡರ್ ಖಾಲಿಯಾಗಿದೆ.
ಈ ವೇಳೆ ಸಿಬ್ಬಂದಿ ಸಿಲಿಂಡಲ್ ಬದಲಾಯಿಸಲು ಹೋದಾಗ ಸಿಲಿಂಡರ್ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡಿರುವುದು ಕಂಡು ಬಂದಿದೆ. ಲಾಡು ತಯಾರಿಸುವ ಮನೆಯಲ್ಲಿ ಜಿಡ್ಡು ಹಾಗೂ ಎಣ್ಣೆ ಪದಾರ್ಥಗಳು ಇದ್ದ ಕಾರಣ, ಬೆಂಕಿಯ ಕೆನ್ನಾಲಿಗೆ ಇಡೀ ಕೋಣೆಗೆ ಆವರಿಸಿದೆ.
ಈ ವೇಳೆ ಕೆಲ ಸಿಬ್ಬಂದಿಗಳು ಬೆಂಕಿ ನಂದಿಸಲು ಪ್ರಯತ್ನಿಸಿದ್ದು, ಇತರರು ಆತಂಕದಿಂದ ಹೊರ ಬಂದಿದ್ದಾರೆ.