ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾಧೀನ ಖೈದಿ ಸಾವು
ರಾಮನಗರ: ಹೊಟ್ಟೆ ನೋವು ಎಂದು ಆಸ್ಪತ್ರೆಗೆ ದಾಖಲಾಗಿದ್ದ ವಿಚಾರಣಾಧೀನ ಖೈದಿಯೊಬ್ಬ ಮೃತಪಟ್ಟಿರುವ ಘಟನೆ ಆ.17 ರ ಮಂಗಳವಾರ ನಡೆದಿದೆ.
ಆಂಧ್ರ ಕುಪ್ಪಂ ಮೂಲದ ವಿಚಾರಣಾಧೀನ ಖೈದಿ ವೆಂಕಟೇಶ್ ಮೃತಪಟ್ಟವರು.
ಆನೆ ದಂತ ಕಳ್ಳತನ ಆರೋಪದ ಮೇಲೆ ಕನಕಪುರ ಅರಣ್ಯ ಇಲಾಖೆ ಅಧಿಕಾರಿಗಳು ಅ.11ರಂದು ಬಂಧಿಸಿದ್ದರು. ವಿಚಾರಣಾಧೀನ ಖೈದಿಯಾಗಿ ರಾಮನಗರ ಜಿಲ್ಲಾ ಕಾರಾಗೃಹದಲ್ಲಿ ಇರಿಸಲಾಗಿತ್ತು.




