ವಿಟ್ಲ ಠಾಣಾ ಕಾನೂನು ಸುವ್ಯವಸ್ಥೆ ವಿಭಾಗಕ್ಕೆ ನೂತನ ಎಸ್ಸೈ ಆಗಿ ವಿದ್ಯಾ, ತನಿಖಾಧಿಕಾರಿಯಾಗಿ ರತ್ನಕುಮಾರ್ ನೇಮಕ
ಬಂಟ್ವಾಳ : ಪಿ.ಎಸ್.ಐ ಗಳಾದ ವಿದ್ಯಾ ಕೆ.ಜೆ, ರತ್ನಕುಮಾರ್ ವಿಟ್ಲ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡಿದ್ದಾರೆ.
ಮಂಗಳೂರು ನಗರದಿಂದ ಲೀನ್ ಬದಲಾವಣೆಗೊಂಡು ಪ.ವ. ಕಚೇರಿಯಲ್ಲಿ ಸ್ಥಳ ನಿರೀಕ್ಷೆಯಲ್ಲಿದ್ದ ವಿದ್ಯಾ ಕೆ.ಜೆ. ರನ್ನು ವಿಟ್ಲ ಠಾಣೆಯ ಕಾನೂನುಸುವ್ಯವಸ್ಥೆ ವಿಭಾಗಕ್ಕೆ ವರ್ಗಾವಣೆಗೊಳಿಸಲಾಗಿದೆ.
ರತ್ನಕುಮಾರ್ ರವರು ಈ ಮೊದಲು ಸುಳ್ಯ ಠಾಣೆಯಲ್ಲಿ ತನಿಖೆ-ಪಿಎಸ್ಐ ಆಗಿ ಕಾರ್ಯ ನಿರ್ವಹಿಸುತ್ತಿದ್ದು, ಇದೀಗ ಅವರನ್ನು ಪಿಎಸ್ಐ ತನಿಖೆ-1 ಆಗಿ ವಿಟ್ಲ ಪೊಲೀಸ್ ಠಾಣೆಗೆ ವರ್ಗಾವಣೆಗೊಳಿಸಿ ಆದೇಶಿಸಲಾಗಿದೆ.




