ಕಾಸರಗೋಡು: ಕಂಟೈನರ್ ಲಾರಿ ಢಿಕ್ಕಿ: ಪಾದಾಚಾರಿ ವೃದ್ದ ಮೃತ್ಯು
ಕಾಸರಗೋಡು: ಕಂಟೈನರ್ ಲಾರಿ ಢಿಕ್ಕಿ ಹೊಡೆದು ವೃದ್ದರೋರ್ವರು ಮೃತಪಟ್ಟ ಘಟನೆ ಬಂದ್ಯೋಡಿನಲ್ಲಿ ಇಂದು ಮಧ್ಯಾಹ್ನ ನಡೆದಿದೆ.
ಬಂಬ್ರಾಣ ದ ಮೊಯಿದಿನ್ ಕುಂಞ (78) ಮೃತ ಪಟ್ಟವರು.
ರಸ್ತೆ ದಾಟುತ್ತಿದ್ದ ಸಂಧರ್ಭದಲ್ಲಿ ಈ ಅಪಘಾತ ನಡೆದಿದ್ದು, ಝೀಬ್ರಾ ಲೈನ್ ಮೂಲಕ ರಸ್ತೆ ದಾಟಲು ನಿಂತಿದ್ದಾಗ ಅತೀ ವೇಗದಿಂದ ಬಂದ ಕಂಟೈನರ್ ಲಾರಿ ಡಿಕ್ಕಿ ಹೊಡೆದಿದ್ದು, ಸ್ಥಳದಲ್ಲೇ ಮೃತ ಪಟ್ಟಿದ್ದಾರೆ.
ಮೃತ ದೇಹವನ್ನು ಮಂಗಲ್ಪಾಡಿ ಸರಕಾರಿ ಆಸ್ಪತ್ರೆಯಲ್ಲಿ ಇರಿಸಲಾಗಿದೆ.
ಕುಂಬಳೆ ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದಾರೆ.





