March 24, 2026

ಕಾರುಗಳ ನಡುವೆ ಅಪಘಾತ: ಮಾರುತಿ ಸ್ವಿಫ್ಟ್‌ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು

0
image_editor_output_image-517912390-1687252890791.jpg

ಮಂಡ್ಯ: ಬೆಂಗಳೂರು– ಮೈಸೂರು ದಶಪಥ ಹೆದ್ದಾರಿ, ಮದ್ದೂರು ತಾಲ್ಲೂಕು ಗೆಜ್ಜಲಗೆರೆ ಬಳಿ ಮಂಗಳವಾರ ಮಾರುತಿ ಸ್ವಿಫ್ಟ್‌ ಹಾಗೂ ಟಾಟಾ ನೆಕ್ಸಾನ್‌ ಕಾರುಗಳ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಮಾರುತಿ ಸ್ವಿಫ್ಟ್‌ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ಧಾರೆ.

ಉತ್ತರ ಪ್ರದೇಶದ ನೀರಜ್‌ ಕುಮಾರ್‌ (50), ಅವರ ಪತ್ನಿ ಸೆಲ್ವಿ (47), ಮಂಡ್ಯದ ಕಾರು ಚಾಲಕ ನಿರಂಜನ್‌ (35) ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ನೀರಜ್‌ ಕುಮಾರ್‌ ಅವರು ಪತ್ನಿಯ ಜೊತೆ ಬೆಂಗಳೂರಿನಿಂದ ಮೈಸೂರಿಗೆ ಬಾಡಿಗೆ ಕಾರ್‌ ಮೂಲಕ ತೆರಳುತ್ತಿದ್ದರು.

ಎದುರಿನ ಮತ್ತೊಂದು ರಸ್ತೆಯಲ್ಲಿ ಬೆಂಗಳೂರು ಕಡೆಗೆ ಚಲಿಸುತ್ತಿದ್ದ ಟಾಟಾ ನೆಕ್ಸಾನ್‌ ಕಾರು ಸೋನೆ ಮಳೆಯಿಂದಾಗಿ ಜಾರಿ ಮೊದಲು ಡಿವೈಡರ್‌ಗೆ ಡಿಕ್ಕಿಯಾಗಿದೆ, ನಂತರ ಪಕ್ಕದ ರಸ್ತೆಯಲ್ಲಿ ಬರುತ್ತಿದ್ದ ಸ್ವಿಫ್ಟ್‌ ಕಾರ್‌ಗೆ ಡಿಕ್ಕಿ ಹೊಡೆದಿದೆ.

Leave a Reply

Your email address will not be published. Required fields are marked *

error: Content is protected !!