ಬೆಳ್ತಂಗಡಿ: ಕಾಡಾನೆಗಳ ಹಿಂಡು ದಾಳಿ ನಡೆಸಿ ಕೃಷಿತೋಟಗಳಲ್ಲಿ ಹಾನಿ ಮಾಡಿರುವ ಘಟನೆ ಚಾರ್ಮಾಡಿ ಗ್ರಾಮದ ಹೊಸಮಠ ಪರಿಸರದಲ್ಲಿ ನಡೆದಿದೆ.
ಹೊಸಮಠ ಪರಿಸರದ ಚಂದ್ರನ್ ಅವರ ತೋಟದಲ್ಲಿ 114 ಅಡಿಕೆ ಮರಗಳು ಮುರಿದು ಹೋಗಿವೆ, ಹಾಗೂ ಸಿಂಧೂ ರವಿ ಅವರ ತೋಟದ 36 ಅಡಿಕೆ ಮರ ಹಾಗೂ ಪುರುಷೋತ್ತಮ ಅವರ ತೋಟದ 33 ಅಡಿಕೆ ಮರಗಳನ್ನು ತುಂಡರಿಸಿ ಹಾಕಿದೆ.