February 3, 2026

ಮಂಗಳೂರು: ಹಂಪ್ಸ್ ಗಮನಿಸದೇ ಏಕಾಏಕಿ ಬ್ರೇಕ್ ಹಾಕಿದ ಬಸ್ ಚಾಲಕ: ಬಸ್‌‌ನ ಹಿಂಬದಿ ಸೀಟಿನಲ್ಲಿ ಕುಳಿತ್ತಿದ್ದ ಮಹಿಳೆಯ ಮೂಳೆ ಮುರಿತ

0
image_editor_output_image1617924850-1681191054641.jpg

ಮಂಗಳೂರು: ಬಸ್‌‌ನ ಹಿಂಬದಿ ಸೀಟಿನಲ್ಲಿ ಕುಳಿತಿದ್ದ ಮಹಿಳೆಯೊಬ್ಬರು ಕೆಳಗೆ ಬಿದ್ದು ಗಂಭೀರ ಗಾಯಗೊಂಡ ಘಟನೆ ನಗರದ ಲೇಡಿಹಿಲ್ ಸಾಯಿಬಾಬಾ ಮಂದಿರದ ಬಳಿ ನಡೆದಿದೆ.

ಪಾರ್ವತಮ್ಮ ಗಾಯಗೊಂಡ ಮಹಿಳೆ ಎಂದು ತಿಳಿದುಬಂದಿದೆ.

ಮಹಿಳೆಯು ತನ್ನ ಪತಿ ಮತ್ತು ಮೊಮ್ಮಗನೊಂದಿಗೆ ಮಂಗಳೂರಿನ ಆಸ್ಪತ್ರೆಗೆಂದು ಬಂದು ವಾಪಸ್ ಉಡುಪಿಗೆ ಹೋಗುತ್ತಿದ್ದರು.

ಈ ವೇಳೆ ಬಸ್ ಲೇಡಿಹಿಲ್ ಸಾಯಿಬಾಬಾ ಮಂದಿರದ ಬಳಿ ತಲುಪಿದಾಗ ಬಸ್ ಚಾಲಕ ಹಂಪ್ಸ್ ಗಮನಿಸದೇ ಏಕಾಏಕಿ ಬ್ರೇಕ್ ಹಾಕಿದ ಪರಿಣಾಮ ಬಸ್‌‌ನ ಹಿಂಬದಿ ಸೀಟಿನಲ್ಲಿ ಕುಳಿತ್ತಿದ್ದ ಪಾರ್ವತಮ್ಮ ಅವರು ಬಸ್ಸಿನೊಳಗೆ ಬಿದ್ದು ಸೋಂಟ ಮತ್ತು ಬೆನ್ನು ಮೂಳೆ ಮುರಿತದ ಗಾಯವಾಗಿದೆ.

ಇನ್ನು ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈ ಬಗ್ಗೆ ಮಂಗಳೂರು ಪಶ್ಚಿಮ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!