ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಚುನಾವಣಾ ಉಸ್ತುವಾರಿ ಯಾಗಿ ಕುಳಾಲು ಸುಭಾಶ್ಚಂದ್ರ ಶೆಟ್ಟಿ ನೇಮಕ
ಬಂಟ್ವಾಳ: 2023 ಸಾರ್ವತ್ರಿಕ ಚುನಾವಣಾ ಉಸ್ತುವಾರಿ ಪಾಣೆಮಂಗಳೂರು ಬ್ಲಾಕ್ ಗೆ ಕುಳಾಲು ಸುಭಾಶ್ಚಂದ್ರ ಶೆಟ್ಟಿಯವರನ್ನು ದ.ಕ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷಾದ ಹರೀಶ್ ಕುಮಾರ್ ನೇಮಕ ಮಾಡಿ ಆದೇಶಿಸಿರುತ್ತಾರೆ.
ಈ ಹಿಂದೆ ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಉಸ್ತುವರಿಯಾಗಿ ಕೆಲಸ ಮಾಡಿದ ಅನುಭವ ಹೊಂದಿರುತ್ತಾರೆ.
ಪ್ರಸ್ತುತ ರಾಜೀವ್ ಗಾಂಧಿ ಪಂಚಾಯತ್ ರಾಜ್ ಘಟಕ ದ.ಕ ಜಿಲ್ಲಾ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತಿದ್ದಾರೆ ಅಲ್ಲದೆ ಜಿಲ್ಲೆಯ ವಿವಿಧ ಸಂಘಟನೆಯ ಪಧಾದಿಕಾರಿಯಾಗಿರುವ ಇವರು ಉತ್ತಮ ಸಂಘಟಕರಾಗಿದ್ದು ಪ್ರಸ್ತುತ ಬಂಟ್ವಾಳ ಕ್ಷೇತ್ರದ ಅಭ್ಯರ್ಥಿಯಾಗಿರುವ ಬಿ ರಮನಾಥ ರೈಯವರ ಆಶೀರ್ವಾದ ದೊಂದಿಗೆ ಗ್ರಾಮ ಅಭಿವೃದ್ಧಿಯಲ್ಲಿ ಯಶಸ್ವಿ ನಾಯಕರಾಗಿರುತ್ತಾರೆ.
ಇದೀಗ ಶ್ರೀ ಬಿ ರಮನಾಥ ರೈಗಳ ಚುನಾವಣೆಯ ಗೆಲಿವುಗಾಗಿ ಅವಿರತ ಶ್ರಮಿಸುತಿದ್ದಾರೆ.




