ವಿಟ್ಲ: ಮಾರ್ಚ್ 20ರಂದು ದಾರುನ್ನಜಾತ್ ಟಿಪ್ಪು ನಗರ ಜಲಾಲಿಯ ರಾತಿಬ್
ವಿಟ್ಲ ಸಮೀಪದ ಕೊಡಂಗಾಯಿ ದಾರುನ್ನಜಾತ್ ಎಜುಕೇಶನಲ್ ಸೆಂಟರ್ ಟಿಪ್ಪು ನಗರ ಸಂಸ್ಥೆಯಲ್ಲಿ ಇದೇ ಬರುವ ತಾರೀಕು 20ರಂದು ಸೋಮವಾರ ರಾತ್ರಿ ಗಂಟೆ 7 ಕ್ಕೆ ವಾರ್ಷಿಕ ಜಲಾಲಿಯ ರಾತಿಬ್ ಮಜ್ಲಿಸ್ ನಡೆಯಲಿದೆ.
ಈ ಕಾರ್ಯಕ್ರಮ ಸಂಸ್ಥೆಯ ಅಧ್ಯಕ್ಷರಾದ ವಾಲೆಮುಂಡೋ ಉಸ್ತಾದ್ ಅಧ್ಯಕ್ಷತೆಯಲ್ಲಿ ನಡೆಯಲಿದ್ದು..ಕಾರ್ಯಕ್ರಮವನ್ನು
ಅಸಯ್ಯದ್ ಶಮೀಮ್ ಅಲ್ ಬುಖಾರಿ ತಂಙಳ್ ಉದ್ಘಾಟಿಸಲಿದ್ದಾರೆ.
ಇನ್ನು ಜಲಾಲಿಯ ನೇತೃತ್ವವನ್ನು ಸಯ್ಯದ್ ಶಿಹಾಬುದ್ದೀನ್ ತಂಙಳ್ ಮದಕ ನಿರ್ವಹಿಸಲಿದ್ದು,.ಅಬ್ದುಲ್ ಹಮೀದ್ ಫೈಝಿ ಕಿಲ್ಲೂರು ಮುಖ್ಯ ಪ್ರಬಾಷಣ ನಡೆಸಲಿದ್ದಾರೆ.
ಕಾರ್ಯಕ್ರಮದಲ್ಲಿ ಇಬ್ರಾಹಿಂ ಫೈಝಿ ಕನ್ಯಾನ ಉಸ್ತಾದ್ ಹಾಗೂ ಹಲವು ಉಲಮಾ ಉಮಾರಗಳು ಭಾಗವಹಿಸಲಿದ್ದು ಆದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಪತ್ರಿಕ ಪ್ರಕಟಣೆಯಲ್ಲಿ ಸಂಸ್ಥೆಯ ಮೆನೇಜರ್ ಹಾಜಿ ಹಮೀದ್ ಕೊಡಂಗಾಯಿ ತಿಳಿಸಿದ್ದಾರೆ.




