ಕಾಸರಗೋಡು: ಹತ್ತು ವರ್ಷದ ಬಾಲಕ ಬಾವಿಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ
ಕಾಸರಗೋಡು: ಪನತ್ತಡಿ ಸಮೀಪದ ಚಾಮುಂಡಿ ಕುನ್ನು ಎಂಬಲ್ಲಿ ಹತ್ತು ವರ್ಷದ ಬಾಲಕ ಬಾವಿಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ನಡೆದಿದೆ.
ಪನತ್ತಡಿ ಸರಕಾರಿ ಶಾಲೆಯ ಐದನೇ ತರಗತಿ ವಿದ್ಯಾರ್ಥಿ ಚಾಮುಂಡಿಕುನ್ನುವಿನ ಪ್ರಭಾಕರ ರವರ ಪುತ್ರ ಅರ್ಜುನ್ (10) ಮೃತ ಪಟ್ಟವನು.
ಇನ್ನು ಭಾನುವಾರ ರಾತ್ರಿ ದಿಡೀರನೆ ನಾಪತ್ತೆಯಾಗಿದ್ದ ಬಾಲಕನನ್ನು ಮನೆಯವರು ಹಾಗೂ ಪರಿಸರ ವಾಸಿಗಳು ಶೋಧ ನಡೆಸಿದಾಗ ಆವರಣ ಇಲ್ಲದ ಬಾವಿಯಲ್ಲಿ ಬಿದ್ದಿರುವುದು ಕಂಡು ಬಂದಿದೆ.




