ಕುಂಬೋಳ್ ಆಟಕೋಯ ತಂಙಳ್, ಮುಖ್ತಾರ್ ತಂಙಳ್ ನೇತೃತ್ವದಲ್ಲಿ “ಉಕ್ಕುಡ ಜಲಾಲಿಯ್ಯ ವಾರ್ಷಿಕ, ಧಾರ್ಮಿಕ ಮತಪ್ರಭಾಷಣ”
ವಿಟ್ಲ: ಬದ್ರಿಯಾ ಜುಮಾ ಮಸೀದಿ ಉಕ್ಕುಡ ಇದರ ಅಧೀನದಲ್ಲಿ ಮಾಸಂ ಪ್ರತಿ ನಡೆಸಿಕೊಂಡು ಬರುತ್ತಿರುವ ಜಲಾಲಿಯ್ಯ ರಾತೀಬ್ ಇದರ ವಾರ್ಷಿಕ ಕಾರ್ಯಕ್ರಮವು ಇಂದು ಮಗ್ರೀಬ್ ನಮಾಝಿನ ಬಳಿಕ ಉಕ್ಕುಡ ಮಸೀದಿ ವಠಾರದಲ್ಲಿ ಪ್ರತ್ಯೇಕವಾಗಿ ಸಜ್ಜುಗೊಂಡಿರುವ ಸಯ್ಯಿದ್ ಜಮಲುಲ್ಲೈಲಿ ವೇದಿಕೆಯಲ್ಲಿ ನಡೆಯಲಿರುವುದು.
ಅಸ್ಸಯ್ಯಿದ್ ಕೆ.ಎಸ್ ಆಟಕೋಯ ತಂಙಳ್ ಕುಂಬೋಳ್ ರವರ ದುಆಃ ಆಶಿರ್ವಾದದೊಂದಿಗೆ ಮಗ್ರೀಬ್ ನಮಾಝಿನ ಬಳಿಕ ಜಲಾಲಿಯ್ಯ ರಾತೀಬ್ ಹಾಗೂ ಅಸ್ಸಯ್ಯಿದ್ ಕೆ.ಎಸ್. ಮುಖ್ತಾರ್ ತಂಙಳ್ ಕುಂಬೋಳ್ ರವರು ಮುಖ್ಯ ಪ್ರಭಾಷಣ ಹಾಗೂ ಸಮಾರೋಪ ದುಆಃ ನೇತ್ರತ್ವವನ್ನು ವಹಿಸಲಿದ್ದಾರೆ.




