ವಿಟ್ಲ: ಉಕ್ಕುಡದಲ್ಲಿರುವ ಭಗವತೀ ಹೋಟೆಲ್ ಮಾಲಕ ಹೃದಯಾಘಾತದಿಂದ ನಿಧನ
ವಿಟ್ಲ: ಉಕ್ಕುಡದಲ್ಲಿರುವ ಭಗವತೀ ಹೋಟೆಲ್ ಮಾಲಕ, ಕನ್ಯಾನ ಕಾಂತಡ್ಕ ನಿವಾಸಿ ರಾಜೇಶ್ ರವರು (40) ಜ.25 ರಂದು ಬೆಳಿಗ್ಗೆ ಹೃದಯಾಘಾತದಿಂದಾಗಿ ನಿಧನರಾದರು.
ರಾಜೇಶ್ ರವರು ವಿಟ್ಲ ಉಕ್ಕುಡದಲ್ಲಿ ಭಗವತೀ ಹೋಟೆಲ್ ಅನ್ನು ನಡೆಸುತ್ತಿದ್ದು, ಭಜನಾ ತಂಡದ ಸದಸ್ಯರೂ ಆಗಿದ್ದರು.
ಮೃತರು ಪತ್ನಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯು ಇಂದು ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ..




