ಸುಳ್ಯ : ಔಷಧಿ ತರಲು ಹೋದ ವಿವಾಹಿತ ಮಹಿಳೆ ನಾಪತ್ತೆ
ಸುಳ್ಯ : ಸುಳ್ಯ ತಾಲೂಕಿನ ವಿವಾಹಿತ ಮಹಿಳೆಯೊಬ್ಬರು ಔಷಧಿ ತರಲು ಹೋಗಿ ಮನೆ ಬಾರದೆ ನಾಪತ್ತೆಯಾದ ಘಟನೆ ನಡೆದಿದೆ.
ವಿವಾಹಿತೆ ಕೀರ್ತಿಶ್ರೀ (26) ಮರಳಿ ಮನೆಗೆ ಬಾರದೇ ತಾಯಿ ಮನೆಗೂ ಹೋಗದೇ ನಾಪತ್ತೆಯಾದ ಮಹಿಳೆಯಾಗಿದ್ದಾರೆ.
ಮರ್ಕಂಜ ಗ್ರಾಮದ ರಾಜಶೇಖರ ಎಂಬವರೊಂದಿಗೆ ಕೀರ್ತಿಶ್ರೀ ಅವರ ವಿವಾಹ ಕಳೆದ ತಿಂಗಳು ಡಿ.26 ರಂದು ನಡೆದಿದ್ದು, ಕೀರ್ತಿ ಶ್ರೀ ಅವರು ಎಲಿಮಲೆಯ ಕ್ಲಿನಿಕ್ಗೆ ಔಷಧಕ್ಕೆಂದು ಹೋದವರು ಮರಳಿ ಮನೆಗೆ ಬಾರದೆ ಕಾಣೆಯಾಗಿದ್ದಾರೆ.
ಈ ಸಂಬಂಧ ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




