ಪುತ್ತೂರು ಯುವತಿಯ ಹತ್ಯೆ ಪ್ರಕರಣ: ಆರೋಪಿಯ ಬಂಧನ
ಪುತ್ತೂರು ತಾಲೂಕಿನ ಮುಂಡೂರು ಗ್ರಾಮದ ಕಂಪ ನಿವಾಸಿ ಗಿರಿಜಾ ಎಂಬವರ ಪುತ್ರಿ ಜಯಶ್ರೀ(23) ಬರ್ಬರ ಹತ್ಯೆಗೆ ಸಂಬಂಧಿಸಿದಂತೆ ಆರೋಪಿ ಭಗ್ನಪ್ರೇಮಿಯನ್ನು ಪೊಲೀಸರು ಬಂಧಿಸಿದ್ದಾರೆ.
ಸುಳ್ಯದ ಕನಕಮಜಲು ನಿವಾಸಿ ಉಮೇಶ್ ಬಂಧಿತ ಆರೋಪಿ. ಕೊಲೆಗೀಡಾದ ಯುವತಿ ಜಯಶ್ರೀ ಮತ್ತು ಉಮೇಶ್ ನಡುವೆ ಪ್ರೀತಿಯಿತ್ತು ಆದರೆ ಉಮೇಶನ ನಡವಳಿಕೆಯಿಂದ ಬೇಸತ್ತು ಜಯಶ್ರೀ ಸಂಬಂಧ ಕಡಿದುಕೊಂಡಿದ್ದಳು ಎನ್ನಲಾಗಿದೆ. ಇದೇ ದ್ವೇಷದಿಂದ ಜಯಶ್ರೀಯನ್ನು ಚೂರಿಯಿಂದ ಇರಿದು ಆರೋಪಿ ಉಮೇಶ್ ಕೊಲೆ ಮಾಡಿದ್ದಾನೆ.




