ವಿಟ್ಲ: ಕುಡಿದು ಅಮಲಿನಲ್ಲಿದ್ದ ಹಿಂದೂ ಯುವಕನನ್ನು ರಸ್ತೆಗೆ ತಳ್ಳಿದ ವೀಡಿಯೋ ವೈರಲ್
ವಿಟ್ಲ: ಪೆರುವಾಯಿ ಜಂಕ್ಷನ್ ನಲ್ಲಿ ಮೇಲೆ ವಾಲಿದ ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬರನ್ನು ರಸ್ತೆಗೆ ತಳ್ಳಿ ಹಾಕಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ರಸ್ತೆಯಲ್ಲಿ ಬಿದ್ದ ಯುವಕನನ್ನು ಮುಸ್ಲಿಂ ಯುವಕರು ರಕ್ಷಣೆ ಮಾಡಿದ್ದಾರೆ.
ಕುಡಿದು ಅಮಲಿನಲ್ಲಿದ್ದ ಹಿಂದೂ ಯುವಕ ತನ್ನ ಮೈಗೆ ವಾಲಿದ ಎಂಬ ಕಾರಣಕ್ಕೆ ಆತನನ್ನು ರೋಡಿಗೆ ತಳ್ಳಿ ಅಮಾನವೀಯಿಂದ ಪೆರುವಾಯಿ ಸಂಘಟನೆಯೊಂದರ ಮುಖಂಡ ನಡೆಸಿದವರೆಂದು ಹೇಳಲಾಗಿದೆ. ಬಳಿಕ ಬಿದ್ದವರನ್ನು ಎಬ್ಬಿಸಲೂ ಹೋಗದೆ ವಾಹನ ಬರುವಾಗಲೂ ಹಾಗೆ ಬಿಟ್ಟಿದ್ದಾರೆ.
ರಸ್ತೆಯಲ್ಲಿ ಬಿದ್ದವರನ್ನು ಶಿರಂಕಲ್ಲು ಶಿವಪ್ರಸಾದ ಅವರನ್ನು ಪೆರುವಾಯಿ ಯುವಕರಾದ ಅನ್ಸಾರ್ ಮತ್ತು ರಫೀಕ್ ಆಸ್ಪತ್ರೆಗೆ ಕಳೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ ಮನೆಗೆ ಕರೆದುಕೊಂಡು ಹೋಗಿ ಬಿಟ್ಟಿದ್ದಾರೆ.




