ಬಂಟ್ಟಾಳ: ವಿದೇಶದಲ್ಲಿ ಅಪಘಾತದಲ್ಲಿ ಮೃತಪಟ್ಟ ಸಜಿಪ ಚಟ್ಟೆಕ್ಕಲ್ ನಿವಾಸಿ ಫಾಹದ್ ಅಂತಿಮ ದರ್ಶನ ಪಡೆಯಲು ಬೃಹತ್ ಜನಸ್ತೋಮ
ಬಂಟ್ಟಾಳ: ಕತಾರಿನ ವಾಹನ ಅಪಘಾತದಲ್ಲಿ ಮೃತರಾದ ಸಜಿಪ ಚಟ್ಟೆಕ್ಕಲ್ ನಿವಾಸಿ ಫಾಹದ್ ಅಂತಿಮ ದರ್ಶನ ಪಡೆಯಲು ಬೃಹತ್ ಜನಸ್ತೋಮ ಸೇರಿದೆ.
ಕಂಚಿನಡ್ಕ ಪದವು ಸಮೀಪದ ಚಟ್ಟೆಕಲ್ಲು ನಿವಾಸಿ ಫಹಾದ್ ಅವರು ಕಳೆದ ಐದು ತಿಂಗಳ ಹಿಂದೆಯಷ್ಟೇ ಕತಾರ್ ಗೆ ತೆರಳಿದ್ದರು. ಬಂಟ್ವಾಳ ದಲ್ಲಿ ಚಾಲಕನಾಗಿ ದುಡಿಯುತ್ತಿದ್ದ ಇವರು ಕತಾರ್ ನಲ್ಲಿ ಕಾರು ಚಾಲಕ ಉದ್ಯೋಗದ ನಿಮಿತ್ತ ತೆರಳಿದ್ದರು. ಸೌದಿ ಅರೇಬಿಯಾದ ಕುಟುಂಬವೊಂದರ ಕಾರು ಚಾಲಕನಾಗಿ ಕೆಲಸಕ್ಕೆ ಸೇರಿದ್ದ ಯುವಕ ಕಾರು ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಅಸಯ್ಯದ್ ಚಟ್ಟೆಕ್ಕಲ್ ತಂಗಳ್ ಸಹಿತ ಹಲವಾರು ಧಾರ್ಮಿಕ ಮುಖಂಡರು ಪಾಲ್ಗೊಂಡು ಕುಟುಂಬವರ್ಗಕ್ಕೆ ಸಾಂತ್ವನ ತುಂಬಿದರು.





