ವಿಟ್ಲ: ಕೊಡಂಗೆ ಖಿಲಾರಿಯಾ ಜುಮಾ ಮಸೀದಿಯ ನೂತನ ಅಧ್ಯಕ್ಷರಾಗಿ ಉದ್ಯಮಿ ಬಶೀರ್ ನಬ ಆಯ್ಕೆ
ವಿಟ್ಲ: ವಿಟ್ಲ ಸಮೀಪದ ಕೊಡಂಗೆ ಖಿಲಾರಿಯಾ ಜುಮಾ ಮಸೀದಿ ಇದರ ನೂತನ ಅಧ್ಯಕ್ಷರಾಗಿ ಬೆಂಗಳೂರು ಉದ್ಯಮಿ ಬಶೀರ್ ನಬ ಇವರು ಆಯ್ಕೆಯಾಗಿದ್ದಾರೆ.
ಉಮ್ಮರ್ ಕೊಡಂಗೆ, ವಕೀಲರು ಕಾರ್ಯದರ್ಶಿಯಾಗಿ, ಅಬ್ದುಲ್ಲ ಕುಂಇ ಕುತ್ತಿಜೇರ ಉಪಾಧ್ಯಕ್ಷರಾಗಿ, ಮಹಮ್ಮದ್ ಕೊಡಂಗೆ ಮತ್ತು ಉಮ್ಮರ್ ಮದನಿ ಜೊತೆ ಕಾರ್ಯದರ್ಶಿಯಾಗಿಯೂ, ಅಹಮದ್ ಊರೂದಂಗಡಿ ಇವರು
ಖಜಾಂಜಿಯಾಗಿ ಸರ್ವನುಮತದಿಂದ ಆಯ್ಕೆಯಾಗಿದ್ದಾರೆ.





