ಶಿವಮೊಗ್ಗ: ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದರು ನಮಗೆ ರಕ್ಷಣೆ ಇಲ್ವಾ?- ಹರ್ಷ ಸಹೋದರಿ
ನನ್ನ ತಮ್ಮ ಹರ್ಷನನ್ನು ಕಳೆದುಕೊಂಡು 8 ತಿಂಗಳು ಆಗಿದೆ, ಇದೀಗ ಪ್ರೇಮಸಿಂಗ್ ಚೂರಿ ಇರಿತ ಸೇರಿದಂತೆ ಪ್ರಕರಣ ನಡೆಯುತ್ತಲೇ ಇದೆ, ಹಾಗಾಗಿ ಬಿಜೆಪಿ ಸರಕಾರ ಇದ್ರೂ ಕೂಡ ನಮಗೆ ರಕ್ಷಣೆ ಇಲ್ಲವೇ ಎಂದು ಹರ್ಷ ಸಹೋದರಿ ಅಶ್ವಿನಿ ಪ್ರಶ್ನಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಕೇಂದ್ರದಲ್ಲೂ, ರಾಜ್ಯದಲ್ಲೂ ಬಿಜೆಪಿ ಸರಕಾರ ಆಡಳಿತದಲ್ಲಿದೆ. ಮೇಲಾಗಿ ಶಿವಮೊಗ್ಗದಲ್ಲೂ ಬಿಜೆಪಿ ಇದೆ. ನಮಗೆ ರಕ್ಷಣೆ ಯಾವಾಗ ಸಿಗುತ್ತದೆ ಎಂದಿದ್ದಾರೆ.

ಇನ್ನು ಹರ್ಷ ಸತ್ತಾಗ ಪ್ರತಿಯೊಬ್ಬರೂ ಬಂದು ನಾವಿದ್ದೇವೆ ಎಂದಿದ್ದರು ಆದರೆ, ಇಲ್ಲಿಯ ತನಕ ಯಾವುದೇ ನ್ಯಾಯ ನಮ್ಮ ಕುಟುಂಬಕ್ಕೆ ಸಿಕ್ಕಿಲ್ಲ ಎಂದು ಹೇಳಿದ್ದಾರೆ.




